ವಿಜಯಸಾಕ್ಷಿ ಸುದ್ದಿ, ಗದಗ
ಹೋಳಿ ಹಬ್ಬದ ನಿಮಿತ್ತ ಗದಗ ಜಿಲ್ಲೆಯಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಕೆಳಕಂಡ ನಗರ ಹಾಗೂ ಪಟ್ಟಣಗಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಂ.ಸುಂದರೇಶ ಬಾಬು ಆದೇಶ ಹೊರಡಿಸಿದ್ದಾರೆ.
ಮಾ.27ರ ಸಾಯಂಕಾಲ 6 ಗಂಟೆಯಿಂದ ಮಾ.29ರ ಮಧ್ಯರಾತ್ರಿವರೆಗೆ ಶಿರಹಟ್ಟಿ, ರೋಣ, ಗಜೇಂದ್ರಗಡ, ನರೇಗಲ್, ಮುಂಡರಗಿ, ಲಕ್ಷ್ಮೇಶ್ವರ ಠಾಣಾ ವ್ಯಾಪ್ತಿಯಲ್ಲಿ ಮದ್ಯಮಾರಾಟ ನಿಷೇಧಿಸಿ ಆದೇಶಿಸಲಾಗಿದೆ.
ಮಾ.28ರ ಬೆಳಗ್ಗೆ 6 ರಿಂದ ಮಾ.29ರ ಮಧ್ಯರಾತ್ರಿವರೆಗೆ ಗದಗ ಗ್ರಾಮೀಣ, ಮುಳಗುಂದ ಭಾಗದಲ್ಲಿ ಮದ್ಯಮಾರಾಟ ನಿಷೇಧಿಸಿ ಆದೇಶಿಸಲಾಗಿದೆ.
ಮಾ.28ರ ಮಧ್ಯರಾತ್ರಿಯಿಂದ ಮಾ.30ರ ಮಧ್ಯರಾತ್ರಿವರೆಗೆ ನರಗುಂದ ಠಾಣಾ ವ್ಯಾಪ್ತಿಯಲ್ಲಿ ಮದ್ಯ ನಿಷೇಧಿಸಿ ಆದೇಶಿಸಲಾಗಿದೆ.
ಮಾ.31 ರ ಮಧ್ಯರಾತ್ರಿಯಿಂದ ಏ.2ರ ಬೆಳಗ್ಗೆ 6 ಗಂಟೆವರೆಗೆ ಗದಗ ಶಹರ ಠಾಣಾ ವ್ಯಾಪ್ತಿ ಹಾಗೂ ಮಾ.31ರ ಸಾಯಂಕಾಲ 6 ಗಂಟೆಯಿಂದ ಏ.2ರ ಬೆಳಗ್ಗೆ 6 ಗಂಟೆವರೆಗೆ ಬೆಟಗೇರಿ, ಬೆಟಗೇರಿ ಬಡವಾವಣೆ ಹಾಗೂ ಲಕ್ಷ್ಮೇಶ್ವರ ಶಹರ ಹಾಗೂ ಶಿಗ್ಲಿ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಮೇಲ್ಕಂಡ ದಿನಾಂಕಗಳನ್ನು ಶುಷ್ಕ ದಿನ ಘೋಷಿಸಿದ್ದು, ನಿಗಧಿತ ಸ್ಥಳಗಳಲ್ಲಿ ಮದ್ಯ ಮಾರಾಟ ಅಂಗಡಿಗಳನ್ನು ಮುಚ್ಚಲು ಆದೇಶ ಹೊರಡಿಸಲಾಗಿದೆ.