ವಿಜಯಸಾಕ್ಷಿ ಸುದ್ದಿ, ಗದಗ: ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಆಶ್ರಯದಲ್ಲಿ ಎಪ್ರಿಲ್ 2ರಿಂದ ಎಪ್ರಿಲ್ 12ರವರೆಗೆ ಬೆಳಿಗ್ಗೆ 6.30ರಿಂದ ಪೂರ್ವಾಹ್ನ 12 ಗಂಟೆಯವರೆಗೆ ಆಶ್ರಮದ ಆವರಣದಲ್ಲಿ 10 ದಿನಗಳ ಕಾಲ ಬೇಸಿಗೆ ರಜೆ ಪ್ರಯುಕ್ತ ಮಕ್ಕಳಲ್ಲಿ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಿಂತನೆ, ಭಾರತೀಯತೆಯ ತತ್ವಗಳ ವಿಚಾರಗಳು, ಯೋಗ, ಧ್ಯಾನ, ಪರಿಸರ ಸಂರಕ್ಷಣೆ ಹಾಗೂ ಆಂಗ್ಲ ಭಾಷೆಯ ಕಲಿಕೆ ಹಾಗೂ ಇನ್ನಿತರ ವಿಷಯಗಳ ಕುರಿತು ಜ್ಞಾನಾರ್ಜನೆ ಶಿಬಿರವನ್ನು ಆಯೋಜಿಸಲಾಗಿದೆ.
ಈ ಸಂಸ್ಕಾರ ಶಿಬಿರದ ಕುರಿತು ಪಾಲಕರು ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಮೂಲಕ ಮಕ್ಕಳನ್ನು ಶಿಬಿರದಲ್ಲಿ ಭಾಗವಹಿಸುವಂತೆ ಮಾಡಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಶ್ರಮದ ಯತಿಗಳಾದ ಸ್ವಾಮಿ ಜಗನಾಥಾನಂದಜೀ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಈ ಶಿಬಿರದಲ್ಲಿ 12ರಿಂದ 18 ವರ್ಷ ಒಳಗಿನ ಮಕ್ಕಳು ಭಾಗವಹಿಸಲು ಅವಕಾಶವಿದ್ದು, ಹೆಸರು ನೋಂದಾಯಿಸಲು ಮಾರ್ಚ್ 31 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಶ್ರಮವನ್ನು ಸಂಪರ್ಕಿಸಲು (ಪ್ರದೀಪ ಹಿರೇಮಠ-7349400222) ಪ್ರಕಟಣೆ ಕೋರಿದೆ.