ಕನ್ನಡದ ಬಿಗ್ ಬಾಸ್ ಶೋ ಆರಂಭವಾದಾಗಿನಿಂದಲೂ ನಿರಂತರವಾಗಿ ನಿರೂಪಣೆ ಮಾಡುತ್ತಿರುವ ಏಕೈಕ ವ್ಯಕ್ತಿ ಕಿಚ್ಚ ಸುದೀಪ್. ಇದೀಗ ಅವರು 12ನೇ ಸೀಸನ್ ಅನ್ನು ಸಹ ಯಶಸ್ವಿಯಾಗಿ ಮುಗಿಸಿದ್ದಾರೆ.
ಫಿನಾಲೆ ವೇದಿಕೆಯಲ್ಲಿ ಬಿಗ್ ಬಾಸ್ ಸುದೀಪ್ಗೆ ವಿಶೇಷ ಧನ್ಯವಾದ ಸಲ್ಲಿಸಿದೆ.
“ಈ ಶೋಗೆ ಜೀವ ತುಂಬಿದವರು ನೀವು. 12 ವರ್ಷಗಳ ಕಾಲ ನಿರಂತರವಾಗಿ ಶೋ ನಡೆಸಿರುವುದು ದಾಖಲೆ. ನೀವು ಈ ವೇದಿಕೆಗೆ ಮಾರ್ಗದರ್ಶಕರಾಗಿದ್ದೀರಿ” ಎಂದು ಬಿಗ್ ಬಾಸ್ ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್, “ನಾನು ಈ ಶೋ ನಿರಂತರವಾಗಿ ನಡೆಸಲು ಕಾರಣ ಸ್ಪರ್ಧಿಗಳು ನೀಡುವ ಗೌರವ. ಪ್ರೀತಿ ಇಲ್ಲದೆ ಯಾವುದೇ ಸಾಧನೆ ಸಾಧ್ಯವಿಲ್ಲ. ನೀವು ನೀಡುವ ಪ್ರೀತಿ ನನಗೆ ಶಕ್ತಿ” ಎಂದರು.
ತಮ್ಮ ಕೆಲಸದ ಬದ್ಧತೆ ಬಗ್ಗೆ ಮಾತನಾಡಿದ ಅವರು, “ರಾತ್ರಿ 3:30ಕ್ಕೆ ಮನೆಗೆ ಬಂದರೂ ಕೂಡ ನಾನು ಈ ಕೆಲಸವನ್ನು ಕೈಬಿಡಲು ಸಾಧ್ಯವಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ಅಷ್ಟು ಜನ ಒಳಗೆ ಕುಳಿತಿದ್ದಾರೆ” ಎಂದು ಹೇಳಿದರು.
“ಈ ವೇದಿಕೆ ಬಹಳ ಶುದ್ಧವಾದದ್ದು. ಇಲ್ಲಿ ಭಾಗವಹಿಸಿದ ಅನೇಕರು ಜೀವನದಲ್ಲಿ ಮುಂದುವರೆದಿದ್ದಾರೆ. ಈ ವೇದಿಕೆಯ ಪ್ರಾಮಾಣಿಕತೆಯೇ ನನ್ನನ್ನು ಇಲ್ಲಿ ನಿಲ್ಲಿಸಿದೆ” ಎಂದು ಹೇಳಿದರು.
ಇದಲ್ಲದೆ, ತಮ್ಮ ತಂಡದ ಪಾತ್ರವನ್ನು ಒಪ್ಪಿಕೊಂಡು, ನಿರ್ದೇಶಕ ಪ್ರಕಾಶ್ ಹಾಗೂ ಸಿಬ್ಬಂದಿಗಳಿಗೆ ಧನ್ಯವಾದ ಸಲ್ಲಿಸಿದರು. ಸುದೀಪ್ ಅವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.



