ಜನತಾ ದರ್ಶನದಲ್ಲಿ 125 ಅಹವಾಲು ಸಲ್ಲಿಕೆ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೋಮವಾರ ಬೆಳಿಗ್ಗೆ 9ನೇ ಜನತಾ ದರ್ಶನವನ್ನು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಸಿ, ಸಾರ್ವಜನಿಕರಿಂದ 125 ದೂರು, ಅಹವಾಲುಗಳನ್ನು ಸ್ವೀಕರಿಸಿದರು.

Advertisement

ಇವುಗಳಲ್ಲಿ ಕಂದಾಯ 31, ಮಹಾನಗರ ಪಾಲಿಕೆ 26, ಜಿಲ್ಲಾ ಪಂಚಾಯಿತಿ 18, ಕಾರ್ಮಿಕ ಇಲಾಖೆ 16, ಪೊಲೀಸ್ ಇಲಾಖೆ 6, ಶಿಕ್ಷಣ ಇಲಾಖೆ 5 ಮತ್ತು ಇತರೆ 23 ಅಹವಾಲುಗಳು ಸೇರಿ ಒಟ್ಟು 125 ದೂರುಗಳಿವೆ. ಇವುಗಳನ್ನು ಸೂಕ್ತವಾಗಿ, ನಿಯಮಾನುಸಾರ ಪರಿಶೀಲಿಸಿ, ಕಾಲಮಿತಿಯಲ್ಲಿ ವಿಲೇವಾರಿ ಮಾಡುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಳೆದ 8 ಜನತಾ ದರ್ಶನಗಳಲ್ಲಿ ಸಾರ್ವಜನಿಕರಿಂದ ಒಟ್ಟು 1,655 ಅಹವಾಲುಗಳನ್ನು ಸ್ವೀಕರಿಸಿ, ಸೂಕ್ತವಾಗಿ ವಿಲೇವಾರಿ ಮಾಡಲಾಗಿದೆ.


Spread the love

LEAVE A REPLY

Please enter your comment!
Please enter your name here