ಜನಿವಾರ ತೆಗೆಯಲು ಒತ್ತಾಯಿಸಿ 200 ಬಸ್ಕಿ: ದೈಹಿಕ ಶಿಕ್ಷಕ ಸಸ್ಪೆಂಡ್!

0
Spread the love

ಉಡುಪಿ: ಕಾರ್ಕಳದ ಮೊರಾರ್ಜಿ ದೇಸಾಯಿ ಇಂಗ್ಲಿಷ್ ಮಾಧ್ಯಮ ವಸತಿ ಶಾಲೆಯಲ್ಲಿ ದೈಹಿಕ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ಜನಿವಾರ ಹಾಗೂ ಕೈದಾರ ತೆಗೆಯುವಂತೆ ಒತ್ತಾಯಿಸಿ, 200 ಬಸ್ಕಿ ಹೊಡೆಯಲು ಹೇಳಿದ ಘಟನೆ ಬೆಳಕಿಗೆ ಬಂದಿದೆ.

Advertisement

ಈ ಕೃತ್ಯದಿಂದ ಬೆಚ್ಚಿಬಿದ್ದ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ದೂರು ನೀಡಿದ್ದು, ನಂತರ ವಿಷಯ ತಿಳಿದ ಪಾಲಕರು ಹಾಗೂ ಗ್ರಾಮಸ್ಥರು ಶಾಲೆಯ ಮುಂದೆ ಮುಖಾಮುಖಿಯಾಗಿದ್ದರು.

ಶಿಕ್ಷಕ ಮದರಶಾ ಎಸ್. ಮಕಂದಾರ್ ಅವರೊಂದಿಗೆ ಪಾಲಕರ ವಾದ–ವಿವಾದ ನಡೆದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾತುಕತೆಯ ವೇಳೆ ಶಿಕ್ಷಕ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದರೂ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಾಲಾ ಆಡಳಿತ ಮಂಡಳಿ ಅವರನ್ನು ತಕ್ಷಣ ಅಮಾನತುಗೊಳಿಸಿದೆ.

ಈ ಘಟನೆಗೆ ಸಮುದಾಯದ ನಾಯಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here