
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ಎಂದಾಕ್ಷಣ ಗವಿಮಠ ಕಣ್ಮುಂದೆ ಬರುತ್ತದೆ. ಗವಿಮಠದ ಜಾತ್ರೆ ದಕ್ಷಿಣದ ಕುಂಭಮೇಳ, ಉತ್ತರದ ಸಿದ್ಧಗಂಗೆ ಎಂತಲೂ ಫೇಮಸ್. 2021ರಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಜಾತ್ರಾ ಮಹೋತ್ಸವ, ಈ ವರ್ಷ ಮತ್ತೇ ಹಿಂದಿನ ವರ್ಷಗಳ ವೈಭವವನ್ನು ಕಟ್ಟಿ ಕೊಡುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳು ನಡೆದಿವೆ.
Advertisement
ಈ ಸಲ ಕೊರೋನಾ ಪ್ರಕರಣಗಳು ಕಳೆದ ಒಂದೂವರೆ ವರ್ಷಗಳ ಹಿಂದಿನ ದಿನಗಳಿಗಿಂತ ಕಡಿಮೆಯಾಗಿದ್ದು, ಅಜ್ಜನ ಅರ್ಥಪೂರ್ಣ ಜಾತ್ರಾ ಮಹೋತ್ಸವಕ್ಕೆ ತಯಾರಿ ನಡೆದಿದೆ.
2022ರ ಜನೇವರಿ 19ರಂದು ಅಜ್ಜನ ಜಾತ್ರೆಯ ಮಹಾರಥೋತ್ಸವಕ್ಕೆ ದಿನ ನಿಗದಿಯಾಗಿದ್ದು, ಹಿಂದಿನಂತೆ ಮೂರು ದಿನಗಳ ಸಾಂಸ್ಕೃತಿಕ ಉತ್ಸವ, ಹದಿನೈದು ದಿನಗಳ ಮಹಾ ಅನ್ನದಾಸೋಹ, ಸಂಜೆ ಮಹಾರಥೋತ್ಸವ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಕುರಿತು ವಿಶೇಷ ಚಟುವಟಿಕೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.