ವಿಜಯಸಾಕ್ಷಿ ಸುದ್ದಿ, ಗದಗ: ನಗರದಲ್ಲಿ ಪ್ರಪ್ರಥಮ ಬಾರಿಗೆ 3ಡಿ ಕೀಹೋಲ್ ಆಪರೇಷನ್ ಬಗ್ಗೆ ಕಾರ್ಯಾಗಾರವನ್ನು ಎಲ್.ವೈ. ದೇಸಾಯಿ ಸ್ಪರ್ಶ ಆಸ್ಪತ್ರೆ ಹಾಗೂ ಗದಗ ಸ್ತ್ರೀರೋಗ ತಜ್ಞರ ಸಂಘದ ವತಿಯಿಂದ ಆಯೋಜಿಸಲಾಗಿತ್ತು.
ಉತ್ತರ ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಜರುಗಿದ ಈ ಕಾರ್ಯಕ್ರಮದಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಿಂದ ಸುಮಾರು 160 ವೈದ್ಯರು ಭಾಗವಹಿಸಿದ್ದರು.
ವೇಟ್ಲ್ಯಾಬ್ ತರಬೇತಿಯ ಉಪಯೋಗವನ್ನು ಎಲ್ಲ 160 ವೈದ್ಯರು ಪಡೆದುಕೊಂಡರು. ನಂತರ ಶಸ್ತ್ರಕ್ರಿಯಾ ದಿಗ್ಗಜರಾದ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಗರ್ಭಕೋಶ ಕಸಿ ಮಾಡಿದ ಖ್ಯಾತಿಯ ಡಾ. ಶೈಲೇಶ್ ಪುಂತಾಂಬೇಕರ್, ಬೆಂಗಳೂರಿನ ಡಾ. ಬಿ.ರಮೇಶ್, ಮುಂಬೈನ ಡಾ. ವಿವೇಕ್ ಸಾಲುಂಕೆ, ಡಾ. ನಿತಿನ್ ಶಾ, ಡಾ. ಸುಧಾ ಟಂಡನ್ ಮತ್ತು ಗದುಗಿನವರೇ ಆದ ಡಾ. ಪ್ರಭಾ ದೇಸಾಯಿ, ಡಾ. ಗುರುಪ್ರಸಾದ್, ಡಾ. ಧನೇಶ್ ದೇಸಾಯಿ ಅವರು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಹೆಚ್.ಕೆ. ಪಾಟೀಲರ ಸಂದೇಶದೊಂದಿಗೆ ಡಾ. ಬಸವರಾಜ ಬೊಮ್ಮನಳ್ಳಿ ಜರುಗಿಸಿದರು.
ಮರುದಿನ 14 ಅತ್ಯಂತ ಕಠಿಣವಾದ ಶಸ್ತçಕ್ರಿಯೆಗಳನ್ನು ಎಲ್.ವೈ. ದೇಸಾಯಿ ಸ್ಮರಣಾರ್ಥ ಸ್ಪರ್ಶ ಆಸ್ಪತ್ರೆಯಲ್ಲಿ ಎಲ್ಲ ನುರಿತ ವೈದ್ಯರು ಉಚಿತವಾಗಿ ನೆರವೇರಿಸಿದರು.