ಬಾಗಲಕೋಟೆ:- ಜಿಲ್ಲೆಯ ಕಡ್ಡಿಮಟ್ಟಿ ರೈಲ್ವೇ ನಿಲ್ದಾಣದ ಸಮೀಪ ಗುಡ್ಡದ ತಿರುವಿನಲ್ಲಿ ರೈಲಿಗೆ ಸಿಲುಕಿ 6 ದನಗಳು ಮೃತಪಟ್ಟ ಘಟನೆ ಜರುಗಿದೆ.
Advertisement
ಹುಬ್ಬಳ್ಳಿಗೆ ತೆರಳುತ್ತಿದ್ದ ಪ್ರಯಾಣಿಕ ರೈಲು, ಹಳಿಯ ಮೇಲೆ ಹೋಗುತ್ತಿದ್ದ ಆರು ದನಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ 6 ದನಗಳ ದೇಹಗಳು ಛಿದ್ರಛಿದ್ರವಾಗಿ ಹಳಿಯಲ್ಲಿ ಬಿದ್ದಿದೆ. ಬಾಗಲಕೋಟೆ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಇನ್ನೂ ಘಟನೆಯಿಂದ ದನಗಳ ಮಾಲೀಕ ಕಂಗಾಲಾಗಿ ಕಣ್ಣೀರು ಹಾಕಿದ್ದು, ಎಲ್ಲರ ಮನ ಕಲಕುವಂತಿತ್ತು.