ಕೋಲಾರ:- ಜಿಲ್ಲೆಯ ಮಾಲೂರು ತಾಲೂಕು ಕಡದನಹಳ್ಳಿ ಗ್ರಾಮದಲ್ಲಿ ಶಾಲೆ ಆವರಣದಲ್ಲಿದ್ದ ಸಂಪ್ನಲ್ಲಿ ಬಿದ್ದು 3ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಜರುಗಿದೆ.
9 ವರ್ಷದ ನರೇಂದ್ರ ಮೃತ ವಿದ್ಯಾರ್ಥಿ. ಕಡದನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ನರೇಂದ್ರ ಇಂದು ಬೆಳಗ್ಗೆ ಶಾಲೆಗೆಂದು ಬಂದು ಬಳಿಕ ನಾಪತ್ತೆಯಾಗಿದ್ದ.
ಗ್ರಾಮದಲ್ಲೆಲ್ಲಾ ಹುಡುಕಾಟ ನಡೆಸಿದ ಪೋಷಕರು ಆತಂಕಗೊಂಡು ಎಲ್ಲೆಡೆ ವಿಚಾರಣೆ ನಡೆಸಿದರು. ಬಳಿಕ ಶಾಲೆ ಆವರಣದಲ್ಲಿರುವ ಸಂಪ್ನಲ್ಲಿ ವಿದ್ಯಾರ್ಥಿ ನರೇಂದ್ರ ಶವ ಪತ್ತೆಯಾಗಿದೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ



