ವಿಜಯಸಾಕ್ಷಿ ಸುದ್ದಿ, ಮುಳಗುಂದ : ಸಾಂಕ್ರಾಮಿಕ ರೋಗಗಳು ಹರಡುವ ಮುನ್ನ ಅವುಗಳ ಬಗ್ಗೆ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಸೊರಟೂರ ಗ್ರಾಮ ಪಂಚಾಯಿತಿ ಪಿಡಿಓ ಮಾಲತೇಶ ಮೆವುಂಡಿ ಹೇಳಿದರು.
ಅವರು ಸಮೀಪದ ಸೊರಟೂರ ಗ್ರಾಮದ ಸರಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಸಾಂಕ್ರಾಮಿಕ ರೋಗ ಮುನ್ನೆಚ್ಚರಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮದಲ್ಲಿ ಈಗಾಗಲೇ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ತಮ್ಮ ಮನೆಗಳ ಸುತ್ತ ಮುತ್ತ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಇದರಿಂದ ಸಾಂಕ್ರಾಮಿಕ ರೋಗ-ರುಜಿನುಗಳಿಂದ ತಪ್ಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಡಾ. ಎಸ್.ಆರ್. ಮಡಿವಾಳರ ಮಾತನಾಡಿ, ಡೆಂಘೀ, ಮಲೇರಿಯಾ, ಚಿಕುನ್ಗುನ್ಯಾ ಸಾಂಕ್ರಾಮಿಕ ರೋಗಗಳು ಈ ಮಳೆಗಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುವುದರಿಂದ ಸಾರ್ವಜನಿಕರು ಮನೆಯಲ್ಲಿ ನೀರಿನ ಪರಿಕರಗಳನ್ನು ಸ್ವಚ್ಛಗೊಳಿಸಬೇಕು. ಒಂದು ವೇಳೆ ಜ್ವರ ಕಾಣಿಸಿಕೊಂಡಲ್ಲಿ ತಕ್ಷಣ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಬೇಕು ಎಂದರು.
ಗ್ರಾ.ಪಂ ಅಧ್ಯಕ್ಷ ಚಂದ್ರವ್ವ ಓಂಕಾರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಸದಸ್ಯರಾದ ಹುಸೇನಬಿ ಚೋಳನವರ, ಬಸಪ್ಪ ಅಣ್ಣಿಗೇರಿ, ಯೋಗ ಶಿಕ್ಷಕ ಹೊನಕೇರಪ್ಪ ಗಾರವಾಡ, ಬಸವರಾಜ ಖಾನಾಪೂರ, ವೀಣಾ ಮಡ್ಡಿಕಾರ, ಶಿವಪುತ್ರಪ್ಪ ಹಂಪಿಹೊಳಿ, ಶ್ರೀದೇವಿ ಅಡ್ರಕಟ್ಟಿ, ಉಮಾ ಕುಸ್ಲಾಪೂರ, ಲತಾ ಮಾಯಪ್ಪನವರ, ಸರಸ್ವತಿ ಓಂಕಾರಿ, ನೀಲಮ್ಮ ಕಲ್ಮನಿ ಇದ್ದರು.