ದಾವಣಗೆರೆ:-ಮಕ್ಕಳಾಗಿಲ್ಲಿಲ್ಲ ಎಂದು ಖಿನ್ನತೆಯಿಂದ ಅನಾರೋಗ್ಯ ಪೀಡಿತ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಲ್ಲಿಗೇನಹಳ್ಳಿಯಲ್ಲಿ ಜರುಗಿದೆ.
ಷಣ್ಮುಖಪ್ಪ (62) ಇಂದ್ರಮ್ಮ(50) ಮೃತ ದುರ್ದೈವಿ ದಂಪತಿಗಳು ಎನ್ನಲಾಗಿದೆ. ವಿವಾಹವಾಗಿ 30 ವರ್ಷ ಕಳೆದರೂ ಮಕ್ಕಳಾಗದೆ ದಂಪತಿಗಳು ಒತ್ತಡಕ್ಕೆ ಒಳಗಾಗಿದ್ದರು. ಅಲ್ಲದೇ ಪಾರ್ಶ್ವವಾಯುಯಿಂದ ಷಣ್ಮುಖಪ್ಪ , ಸಕ್ಕರೆ ಕಾಯಿಲೆಯಿದ್ದ ಇಂದ್ರಮ್ಮ ಬಳಲುತ್ತಿದ್ದರು. ಮಕ್ಕಳ ಚಿಂತೆಯಲ್ಲಿ ದಂಪತಿಗಳು ಬಳಲಿ ಅನಾರೋಗ್ಯಕ್ಕೆ ತುತ್ತಾಗಿದ್ದರು.
ಇದೀಗ ಜೋಳಕ್ಕೆ ಹುಳ ಹತ್ತದಂತೆ ತಡೆಯಲು ಇಡುವ ವಿಷಪೂರಿತ ಮಾತ್ರೆ ನುಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೋವು ತಡೆಯಲಾರದೆ ಕಿರುಚಾಡಿದ್ದ ದಂಪತಿಗಳ ದ್ವನಿ ಕೇಳಿ ಅಕ್ಕ-ಪಕ್ಕದ ಮನೆಯವರು ಧಾವಿಸಿದರು. ಅಲ್ಲದೇ ತಕ್ಷಣ ನ್ಯಾಮತಿ ಸರ್ಕಾರಿ ಆಸ್ಪತ್ರೆಗೆ ಇಬ್ಬರನ್ನು ರವಾನೆ ಮಾಡಲಾಗಿತ್ತು.
ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದ್ಯೋಯ್ಯುವ ವೇಳೆ ಪತಿ ಷಣ್ಮುಖಪ್ಪ ಸಾವನ್ನಪ್ಪಿದ್ದರೆ, ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ಇಂದ್ರಮ್ಮ ನ್ಯಾಮತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ದಂಪತಿಗಳ ಕರುಣಾಜನಕ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದು, ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.