ಕೊಡಗು: ಕುಶಾಲನಗರ ಸೇತುವೆಯಿಂದ ಒಂದು ಕಿ.ಮೀ. ದೂರದ ಕಾವೇರಿ ನದಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ಮೊನ್ನೆ ದಿನ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಮಡಿಕೇರಿ ಉಪ ವಿಭಾಗಾಧಿಕಾರಿ ಕಚೇರಿಯ ಉದ್ಯೋಗಿ ಅರುಣ್ ರವರ ಮೃತದೇಹವನ್ನು ದುಬಾರೆ ರಿವರ್ Rafting ತಂಡದವರು ಶೋಧಿಸುತ್ತಿದ್ದಾಗ ಇಂದು ಮಧ್ಯಾಹ್ನ 1.30 ರ ಸಮಯದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಬಿದಿರುಗಳ ನಡುವೆ ನೇತಾಡುತ್ತಿದ್ದುದು ಕಂಡುಬಂದಿದೆ.
Advertisement
ದುಬಾರೆ ರಿವರ್ Rafting ತಂಡದ ನಿತಿನ್, ರಾಜೇಶ್, ಕಾರ್ತಿಕ್, ಲಿಖಿತ್, ರಂಜು, ಇಕ್ಬಾಲ್ ಮತ್ತು ಚೇತನ್ ಹಾರ್ನ್ ಬೆಲ್ ಇವರುಗಳು ಇನ್ನೂ ಪತ್ತೆಯಾಗದ ಅರುಣ್ ರವರ ಮೃತದೇಹದ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ.