ಕರ್ನಾಟಕ ರಕ್ಷಣಾ ವೇದಿಕೆಯ ಗದಗ ಜಿಲ್ಲಾ ಕಾರ್ಮಿಕ ಘಟಕದ ಸದಸ್ಯರು ಕರವೇ ರಾಜಾಧ್ಯಕ್ಷ ಟಿ.ಎ. ನಾರಾಯಣಗೌಡ್ರ ಅವರನ್ನು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಭೇಟಿ ಮಾಡಿ, ಗದಗ ಜಿಲ್ಲಾ ಕಾರ್ಮಿಕ ಘಟಕದ ಬಗ್ಗೆ ಚರ್ಚಿಸಿದರು. ಘಟಕದ ಗದಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತೌಸಿಫ ಢಾಲಾಯತರ ಸೇವೆಯನ್ನು ರಾಜ್ಯಾಧ್ಯಕ್ಷರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಗದಗ ಘಟಕದ ನೂತನ ಜಿಲ್ಲಾಧ್ಯಕ್ಷ ಹನಮಂತಪ್ಪ ಎಚ್.ಅಬ್ಬಿಗೇರಿ, ಮಾರುತಿ ಈಳಿಗೇರ, ಕೃಷ್ಣಾ ಲಮಾಣಿ, ಶರಣಪ್ಪ ಕರಮುಡಿ, ವಿರುಪಾಕ್ಷಪ್ಪ ಹಿತ್ತಲಮನಿ, ಲೋಕೇಶ ಸುತಾರ, ನಿಯಾಜ ಶೇಖ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.