ಗದಗ:- ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಅಪರಿಚಿತ ವಾಹನ ಹರಿದು ಬೆಳ್ಳಂ ಬೆಳಿಗ್ಗೆ ಚಹಾ ಕುಡಿಯಲು ಹೋಗಿದ್ದ ವೃಧ್ಧ ಸಾವನ್ನಪ್ಪಿದ ಘಟನೆ ಜರುಗಿದೆ. ನರೇಗಲ್ ಪಟ್ಟಣದ ನಿವಾಸಿ 65 ವರ್ಷದ ಮಲ್ಲಯ್ಯ ಬಕ್ಕಯ್ಯನಮಠ ಮೃತ ದುರ್ದೈವಿ ಎನ್ನಲಾಗಿದೆ.
Advertisement
ಇಂದು ಬೆಳಗಿನ ಜಾವ 5.30 ರ ಸುಮಾರಿಗೆ ಮನೆಯಿಂದ ಚಹಾ ಕುಡಿಯಲೆಂದು ಹೊರಗೆ ಹೋಗಿದ್ದಾಗ ಅಪರಿಚಿತ ವಾಹನ ವೇಗವಾಗಿ ಬಂದು ವೃಧ್ಧನ ಮೇಲೆ ಏಕಾಏಕಿ ಹರಿದಿದೆ. ಪರಿಣಾಮ ವೃಧ್ಧನ ದೇಹ ಛಿದ್ರ ಛಿದ್ರವಾಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ನರೇಗಲ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲದೇ ವಾಹನ ಪತ್ತೆಗೆ ಮುಂದಾಗಿದ್ದಾರೆ.