ಬೆಂಗಳೂರು:- ಅದ್ದೂರಿಯಾಗಿ ತಂಗಿ ಮದುವೆ ಮಾಡಲು ಗಾಂಜಾ ಮಾರಲು ಮುಂದಾಗಿದ್ದವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೊದಲ ಯತ್ನದಲ್ಲಿಯೇ ಬಾಣಸವಾಡಿ ಪೊಲೀಸರು ಲಾಕ್ ಮಾಡಿದ್ದಾರೆ. ಪುತ್ತೂರು ಮೂಲದ ಬದ್ರುದ್ದಿನ್ ಬಂಧಿತ ಆರೋಪಿ. ಹೊಟೇಲ್ ನಲ್ಲಿ ಕೆಲಸ ಮಾಡ್ತಿದ್ದ ಬದ್ರುದ್ದಿನ್ ಗೆ ಮನೆ ನಿರ್ವಹಣೆ ಕಷ್ಟವಾಗಿತ್ತು.ಆವಾಗ ಯಾರೋ ಸ್ನೇಹಿತರ ಮೂಲಕ ಗಾಂಜಾ ಮಾರಿ ಹಣ ಮಾಡಬಹುದು ಅಂತ ತಿಳಿದಿದೆ.
Advertisement
ಹೇಗೋ ಮಾಡಿ ಪೆಡ್ಲರ್ ಒಬ್ಬರ ಕಾಂಟೆಕ್ಟ್ ಮಾಡಿ ಓರಿಸ್ಸಾಗೆ ಹೋಗ್ತಾನೆ. ಅಲ್ಲಿ ಲಾರಿ ಚಾಲಕನ ಮೂಲಕ ಗಾಂಜಾ ಖರೀದಿ ಮಾಡಿ ಬೆಂಗಳೂರಿಗೆ ಬರ್ತಿದ್ದ. ದುರಂತ್ ಎಕ್ಸ್ ಪ್ರೆಸ್ ಟ್ರೈನ್ ಮೂಲಕ ಬರ್ತಿದ್ದಾಗ ಎಸ್.ಎಂ.ಟಿ ರೆಲ್ವೆ ನಿಲ್ದಾಣದಲ್ಲಿ ಪೊಲೀಸರಿಗೆ ಲಾಕ್ ಆಗಿದ್ದಾನೆ.