ಬೆಂಗಳೂರು: ನನ್ನದು ತೆರೆದ ಪುಸ್ತಕ ಅಂತಾರೆ ಸಿದ್ದರಾಮಯ್ಯ. ದಲಿತನ ಜಾಗದಲ್ಲಿ ಕಟ್ಟಿದ್ದ ಮನೆ ಯಾರಿಗೆ ಸೇಲ್ ಮಾಡಿದ್ದೀರಿ? ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
Advertisement
ಜೆಪಿ ಭವನದಲ್ಲಿ ಮಾತನಾಡಿದ ಅವರು, ದಲಿತನಿಗೆ ಹಂಚಿಕೆಯಾದ ಮುಡಾ ಸೈಟ್ನಲ್ಲಿ ಅಕ್ರಮವಾಗಿ ಸಿದ್ದರಾಮಯ್ಯ ಮನೆ ಕಟ್ಟಿದ್ದಾರೆ. ಮುಡಾ ಕೇಸ್ ಮಾತ್ರ ಅಲ್ಲ. ಮೈಸೂರಿನಲ್ಲಿ ಸೀರಿಸ್ ಆಫ್ ಅಕ್ರಮ ಕೇಸ್ ಸಿದ್ದರಾಮಯ್ಯರದ್ದು ಇದೆ ಅಂತ ಆರೋಪ ಮಾಡಿದರು.
ಇನ್ನೂ ನನ್ನದು ತೆರೆದ ಪುಸ್ತಕ ಅಂತಾರೆ ಸಿದ್ದರಾಮಯ್ಯ. ದಲಿತನ ಜಾಗದಲ್ಲಿ ಕಟ್ಟಿದ್ದ ಮನೆ ಯಾರಿಗೆ ಸೇಲ್ ಮಾಡಿದ್ದೀರಿ? ಈಗ ಈ ಮನೆ ಯಾರ ಕೈಯಲ್ಲಿ ಇದೆ? ಸುಮ್ಮನೆ ಹೆಸರಿಗೆ ಮಾತ್ರ ಸಿದ್ದರಾಮಯ್ಯ ಮಾರಾಟ ಮಾಡಿದ್ದೇನೆ ಎಂದು ತೋರಿಸಿದ್ದಾರೆ. ಆ ದಾಖಲಾತಿ ತೆಗೆದರೆ ಸಿದ್ದರಾಮಯ್ಯ ವಿರುದ್ದ ದೊಡ್ಡ ರಾಮಾಯಣ ಶುರುವಾಗುತ್ತದೆ ಅಂತ ಸಿಎಂ ವಿರುದ್ದ ವಾಗ್ದಾಳಿ ನಡೆಸಿದರು.