ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಒಕ್ಕಲಿಗ ನಾಯಕರ ಮನವಿ

1
Spread the love

ಬೆಂಗಳೂರು: ಮಾಜಿ ಸಚಿವ ಮುನಿರತ್ನ ಅವರ ಪ್ರಕರಣಗಳ ತನಿಖೆಗೆ ಪೊಲೀಸರ ವಿಶೇಷ ತನಿಖಾ ತಂಡ ರಚಿಸುವಂತೆ ಒಕ್ಕಲಿಗ ಸಮುದಾಯದ ಸಚಿವರು, ಶಾಸಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು.̤

Advertisement

ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾ ಒಕ್ಕಲಿಗ ಸಚಿವರು, ಶಾಸಕರ ನಿಯೋಗ ಮನವಿ ಸಲ್ಲಿಸಿದೆ. ಸಚಿವ ಚಲುವರಾಯಸ್ವಾಮಿ ಸಚಿವ ಕೃಷ್ಣಬೈರೇಗೌಡ, ಸಚಿವ ಸುಧಾಕರ್, ಶಾಸಕ ಶರತ್ ಬಚ್ಚೇಗೌಡ, ಕುಣಿಗಲ್ ರಂಗನಾಥ್ ಸೇರಿ ಹಲವರು ನಿಯೋಗದಲ್ಲಿ ಇದ್ದರು.

ಬಿಜೆಪಿ ಶಾಸಕ ಮುನಿರತ್ನ ಅವರು ಒಕ್ಕಲಿಗ ಸಮುದಾಯಕ್ಕೆ ನಿಂದನೆ, ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಮತ್ತು ಬ್ಲ್ಯಾಕ್​ಮೇಲ್​ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಅತ್ಯಾಚಾರ ಮತ್ತು ಬ್ಲ್ಯಾಕ್​ಮೇಲ್​ ಮಾಡಿರುವ ಆರೋಪದಲ್ಲಿ ಮುನಿರತ್ನ ಅವರನ್ನು ಬಂಧಿಸಲಾಗಿದೆ.


Spread the love

1 COMMENT

  1. ರಾಜ್ಯದಲ್ಲಿ ಅನೇಕ ಪ್ರಕರಣಗಳ ತನಿಖೆಗಾಗಿ ಎಸ್ಐಟಿ
    ತಂಡಗಳನ್ನು ರಚಿಸಲಾಗಿದೆ.ಈ ತಂಡಗಳ ವಿಚಾರಣೆಯ
    ಪ್ರತಿಯೊಂದು ಹಂತದ ವರದಿಗಳನ್ನು ಮಾಧ್ಯಮದವರು ವಿಭಿನ್ನ ಶೈಲಿಯಲ್ಲಿ ದಿನದ 24*7 ಬಿತ್ತರಿಸುವದನ್ನು ನೋಡಿ
    ನೋಡಿ ರಾಜ್ಯದ ಜನ ಬೇಸತ್ತಿದ್ದು ಸರ್ಕಾರ ಯಾವುದೇ
    ಪ್ರಕರಣಗಳ ವಿಚಾರಣಾ ವರದಿಗಳನ್ನು ಮಾಧ್ಯಮಗಳಿಗೆ
    ಬಿಡುಗಡೆಗೊಳಿದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು.
    ವಿಚಾರಣಾಧೀನ ವ್ಯಕ್ತಿಯ ಕುಟುಂಬಸ್ಥರು ಸಹಿತ 24*7
    ಮಾನಸಿಕ ಚಿತ್ರಹಿಂಸೆ ಅನುಭವಿಸುವಂತಾ ಮಾಧ್ಯಮದ
    ನಡೆಗಳಿಗೆ ಬ್ರೇಕ್ ಹಾಕಬೇಕು

LEAVE A REPLY

Please enter your comment!
Please enter your name here