Homecultureವಿಶ್ವವ್ಯಾಪಕತೆಯ ಭಾವನೆ ಮೂಡಲಿ : ಸಿದ್ಧರಾಮ ಶ್ರೀಗಳು

ವಿಶ್ವವ್ಯಾಪಕತೆಯ ಭಾವನೆ ಮೂಡಲಿ : ಸಿದ್ಧರಾಮ ಶ್ರೀಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಭಾರತ ಸರ್ವಧರ್ಮಗಳ ಸಮನ್ವಯದ ತಾಣವಾಗಿದೆ. ಇಲ್ಲಿ ಸರ್ವ ಧರ್ಮೀಯರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ನಮ್ಮ ನಮ್ಮ ಧರ್ಮದ ಬಗ್ಗೆ ಪರಿಪೂರ್ಣವಾಗಿ ತಿಳಿಯಬೆಕೆಂದರೆ ಭಾರತದಲ್ಲಿರುವ ಅನ್ಯ ಧರ್ಮಗಳ ಅಧ್ಯಯನವು ಬಹಳ ಅವಶ್ಯ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ 2711ನೆಯ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನಮ್ಮ ಧರ್ಮದ ಬಗ್ಗೆ ಅಭಿಮಾನ ಮೂಡಬೇಕಾದರೆ ಬೇರೆ ಬೇರೆ ಧರ್ಮಗ್ರಂಥಗಳ ಅಧ್ಯಯನ ಮಾಡಬೇಕು. ಧರ್ಮಸಹಿಷ್ಣುತೆ ಬರೀ ಮಾತುಗಳಲ್ಲಿ ಸೀಮಿತವಾದರೆ ಸಾಲದು. ಧರ್ಮಸಹಿಷ್ಣುತೆ ಭಾವ ಮೂಡಬೇಕಾದರೆ, ಬೆಳೆಯಬೇಕಾದರೆ, ಬದುಕಬೇಕಾದರೆ ಪ್ರತಿಯೊಬ್ಬರು ಶಾಂತಿ, ಸಮಾನತೆ, ಸೌಹಾರ್ದತೆಯಿಂದ ನಡೆದುಕೊಳ್ಳಬೇಕು. ಇಸ್ಲಾಂ, ಕ್ರಿಸ್ತಿಯನ್, ಪಾರ್ಸಿ, ಜೈನ್, ಬೌದ್ದ ಎಲ್ಲಾ ಧರ್ಮಗಳು ಸಾರುವ ಸಂದೇಶ ಒಂದೇ. ಧರ್ಮಗ್ರಂಥಗಳ ಅಧ್ಯಯನದಿಂದ ಸಂಕುಚಿತತೆ ನಾಶವಾಗಿ, ನಾವೆಲ್ಲರೂ ಒಂದು ಎಂಬ ವಿಶ್ವವ್ಯಾಪಕತೆಯ ಭಾವನೆ ಮೂಡುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಗದಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕ್ಬರ್‌ಸಾಬ್ ಬಬರ್ಚಿಯವರನ್ನು, ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ರತ್ನಾಬಾಯಿ ಜಿ.ಬದಿ ಇವರುಗಳನ್ನು ಸನ್ಮಾನಿಸಲಾಯಿತು.
ವಚನ ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನಡೆಸಿಕೊಟ್ಟರು.

ಧರ್ಮಗ್ರಂಥ ಪಠಣವನ್ನು ಪ್ರಶಾಂತ ಜಡಗೊಂಡ, ವಚನ ಚಿಂತನವನ್ನು ಮಂಜುನಾಥ ಅಸ್ಕಿಯವರು ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಶಿವಣ್ಣ ಯರಾಸಿಯವರು ಹಾಗೂ ಸಮಾಜ ಸೇವಕರಾದ ತಯ್ಯಬ ದಾದಾಸಾಹೇಬ್ ಕುನ್ನಿಬಾವಿ ವಹಿಸಿಕೊಂಡಿದ್ದರು. ಸಿದ್ರಾಮಯ್ಯ ಕಾಶಿಮಠ ಬಸವಣ್ಣನವರ ರೂಪಕದ ಏಕಪಾತ್ರಾಭಿನಯವನ್ನು ಮಾಡಿ ಎಲ್ಲರನ್ನು ರಂಜಿಸಿದರು. ಡಾ.ಉಮೇಶ ಪುರದ ಸ್ವಾಗತಿಸಿದರು. ಪ್ರೊ. ಶಿವಾನಂದ ಹೊಂಬಳ ಕಾರ್ಯಕ್ರಮ ನಿರೂಪಿಸಿದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಉಮೇಶ ಪುರದ, ವಿದ್ಯಾವತಿ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿ ಚೇರಮನ್ ಐ.ಬಿ. ಬೆನಕೊಪ್ಪ, ಶಿವಾನುಭವ ಸಮಿತಿ ಸಹಚೇರಮನ್ ಶಿವಾನಂದ ಹೊಂಬಳ ಉಪಸ್ಥಿತರಿದ್ದರು.

ಉಪನ್ಯಾಸಕರಾಗಿ ಆಗಮಿಸಿದ ಗದಗ ಡಿ.ಜಿ.ಎಂ ಆಯುರ್ವೇದ ಕಾಲೇಜಿನ ಡಾ. ಎಂ.ಡಿ. ಸಮುದ್ರಿ ಸರ್ವ ಧರ್ಮ ಸಮನ್ವಯ ವಿಷಯವಾಗಿ ಮಾತನಾಡುತ್ತಾ, ಮಾನವ ಹಲವಾರು ಧರ್ಮಗಳ ಗೊಂದಲದಲ್ಲಿ ಇದ್ದಾನೆ. ನನ್ನ ಧರ್ಮವೇ ಶ್ರೇಷ್ಠ ಎಂಬ ಭಾವನೆಯಲ್ಲಿ ಇರದೆ, ಸರ್ವಧರ್ಮಗಳಲ್ಲಿ ಏಕತೆ ಕಾಣಬೇಕು. ಅನೇಕ ಮಹಾತ್ಮರು ಸಾರಿದ ಸಂದೇಶಗಳನ್ನು ಅರಿತು ನಡೆಯಬೇಕು ಎಂದು ಹೇಳಿದರಲ್ಲದೆ, ಮಹಮ್ಮದ ಪೈಗಂಬರ್ ಹಾಗೂ ಬಸವಣ್ಣನವರ ಸಂದೇಶಗಳನ್ನು ತುಲನಾತ್ಮಕವಾಗಿ ತಿಳಿಸಿಕೊಟ್ಟರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!