ಬೆಂಗಳೂರಿನಲ್ಲಿ ನಿಲ್ಲದ ರೋಡ್ ರೇಜ್ ಗೆ ಪ್ರಕರಣ: ಪುಂಡರ ದಾಳಿಗೆ ಬೆಚ್ಚಿಬಿದ್ದ ದಂಪತಿ!

0
Spread the love

ಬೆಂಗಳೂರು:-ಬೆಂಗಳೂರು ನಗರದಲ್ಲಿ ರೋಡ್ ರೇಜ್‌‌ ಪ್ರಕರಣ ನಿಲ್ಲುತ್ತಿಲ್ಲ. ಇದಕ್ಕೆ ಕಡಿವಾಣ ಹಾಕಬೇಕಾದ ಪೊಲೀಸರು ಕೂಡ ಸೈಲೆಂಟ್ ಆಗಿಬಿಟ್ಟಿದ್ದಾರೆ.

Advertisement

ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ರೋಡ್ ರೇಜ್ ಪ್ರಕರಣ ನಡೆದಿದ್ದು, ಈ ಘಟನೆಯಿಂದ ಕಾರಿನಲ್ಲಿದ್ದ ದಂಪತಿ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಬೆಂಗಳೂರಿನ ಕಸವನಹಳ್ಳಿ ಅಮೃತ ಕಾಲೇಜು ಬಳಿ ರೋಡ್ ರೇಜ್ ಪ್ರಕರಣ ಕಂಡು ಬಂದಿದೆ.

ದೀಪಾವಳಿ ಶಾಪಿಂಗ್‌ ಮುಗಿಸಿ ಮನೆಗೆ ಹೊರಟಿದ್ದ ಕುಟುಂಬದ ಮೇಲೆ ಪುಂಡರು ದಾಳಿ ನಡೆದಿದೆ. ಈ ವೇಳೆ 5 ವರ್ಷದ ಮಗುವಿನ ತಲೆಗೆ ಪೆಟ್ಟಾಗಿದೆ.

ಅಕ್ಟೋಬರ್‌ 30 ರಂದು ದೀಪಾವಳಿ ಶಾಪಿಂಗ್‌ಗೆ ತಮ್ಮ ಮಕ್ಕಳೊಂದಿಗೆ ಬಂದಿದ್ದ ದಂಪತಿ ರಾತ್ರಿ 9:30ರ ಸುಮಾರಿಗೆ ಶಾಪಿಂಗ್‌ ಮುಗಿಸಿ ಹೊರಟಿದ್ದರು. ಚಾಲನ ಸೀಟ್‌ನಲ್ಲಿ ಪತಿ ಅನೂಪ್‌ ಜಾರ್ಜ್‌, ಪಕ್ಕದಲ್ಲಿ ಪತ್ನಿ, ಹಿಂಭಾಗ ಇಬ್ಬರು ಮಕ್ಕಳು ಕುಳಿತಿದ್ದರು.

ಈ ವೇಳೆ ಕಿಡಿಗೇಡಿಗಳು ಆ ಕುಟುಂಬಕ್ಕೆ ತೊಂದರೆ ಕೊಟ್ಟಿದ್ದಾರೆ. ಕಾರನ್ನು ಅಡ್ಡಗಟ್ಟಿ, ಗ್ಲಾಸ್‌ ಇಳಿಸುವಂತೆ ಆವಾಜ್‌ ಹಾಕಿದ್ದಾರೆ. ಚಾಲಕ ಅನೂಪ್‌ ಜಾರ್ಜ್‌ ಹೆದರಿ ಗ್ಲಾಸ್‌ ತೆರೆಯದೇ ಇದ್ದಿದ್ದರಿಂದ ಕೋಪಗೊಂಡ ಪುಂಡರು ಮಕ್ಕಳು ಇದ್ದಾರೆ ಎಂಬುದನ್ನೂ ನೋಡದೇ ಕಾರಿನ ಮೇಲೆ ಕಲ್ಲಿನಿಂದ ದಾಳಿ ನಡೆಸಿದ್ದಾರೆ

ಗಾಜು ಒಡೆದು 5 ವರ್ಷದ ಮಗುವಿನ ತಲೆಗೆ ಗಾಯವಾಗಿ, ಕಾರಿನಲ್ಲೇ ರಕ್ತ ಚೆಲ್ಲಿದೆ. ಕಲ್ಲೇಟು ಬೀಳುತ್ತಿದ್ದಂತೆ ಮಗು ಚೀರಾಡಿದೆ. ತಕ್ಷಣ ಸಮೀಪದಲ್ಲೇ ಇದ್ದ ಆಸ್ಪತ್ರೆಗೆ ಪೋಷಕರು ಮಗುವನ್ನು ಕರೆದೊಯ್ದು, ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು ಮಗುವಿನ ತಲೆಗೆ 3 ಸ್ಟಿಚ್ ಹಾಕಿದ್ದಾರೆ. ಬಳಿಕ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದಂಪತಿ ದೂರು ದಾಖಲಿಸಿದ್ದಾರೆ.

ದೂರಿನ ಅನ್ವಯ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


Spread the love

LEAVE A REPLY

Please enter your comment!
Please enter your name here