ನೀರಿನ ಪೈಪ್ ಒಡೆದವರ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿಯ ಸೈಂಟ್ ಜಾನ್ಸ್ ಶಾಲೆ ಹತ್ತಿರವಿರುವ ರೈಲ್ವೆ ಜಾಗೆಯನ್ನು ಒತ್ತುವರಿ ಮಾಡಿಕೊಂಡು ನಗರಸಭೆಯ ಕಟ್ಟಡದಲ್ಲಿ ಸುಮಾರು 2-3 ವರ್ಷದಿಂದ ಅನಧಿಕೃತವಾಗಿ ಗೋಡೆ ಕಟ್ಟಿಕೊಂಡು ಬೋರ್‌ವೇಲ್ ಕೊರೆಯುವ ಸಂದರ್ಭದಲ್ಲಿ ಪೈಪ್ ಒಡೆದು ನೀರು ಪೋಲು ಮಾಡಿದ್ದಾರೆ ಎಂದು ಎಂದು ಎಮ್. ಸಲೀಮ್‌ ಅಹ್ಮದ ಮಾಳೇಕೊಪ್ಪ ಆರೋಪಿಸಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇವರಿಗೆ ರೈಲ್ವೆ ಒತ್ತುವರಿ ಜಾಗೆಯಲ್ಲಿ ಬೋರ್‌ವೆಲ್ ತೆಗಸಲು ಅನುಮತಿ ಕೊಟ್ಟವರಾರು ಎಂದು ಪ್ರಶ್ನಿಸಿದ್ದಾರೆ. ಇದು ಒಂದು ಸಾರ್ವಜನಿಕರ ಆಸ್ತಿ. ನೀರಿನ ಬೀಡಿನ ಪೈಪ್ ಒಡೆದವರ ಮೇಲೆ ಎಫ್.ಐ.ಆರ್. ಮಾಡಬೇಕು ಮತ್ತು ರಿಪೇರಿಯ ಖರ್ಚನ್ನು ಸಂಬಂಧಿಸಿದವರಿಂದಲೇ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here