ವಿಜಯಸಾಕ್ಷಿ ಸುದ್ದಿ, ಗದಗ: ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಜಿಯವರ ದಿವ್ಯ ಸಾನ್ನಿಧ್ಯದಲ್ಲಿ, ಶಾಸಕ ಸಿ.ಸಿ. ಪಾಟೀಲರ ಅಧ್ಯಕ್ಷತೆಯಲ್ಲಿ ನ. 24ರ ಸಾಯಂಕಾಲ 4 ಗಂಟೆಗೆ ಕಾರ್ಪೋರೇಷನ್ ಬ್ಯಾಂಕ್ ಹತ್ತಿರದ ಬಸವೇಶ್ವರ ಕಾಮರ್ಸ್ ಕಾಲೇಜನಲ್ಲಿ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆ ಜರುಗಲಿದೆ.
ಈ ಸಭೆಯಲ್ಲಿ ಗದಗ ಜಿಲ್ಲೆಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ-ಸೂಚನೆಗಳನ್ನು ನೀಡಬೇಕು. ಸಭೆಯಲ್ಲಿ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ್, ವಕೀಲ ಸಂಘದ ಅಧ್ಯಕ್ಷ ಎಸ್.ಎಸ್. ಹುರಕಡ್ಲಿ, ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಮ.ಅಂಗಡಿ, ರೈತ ಘಟಕದ ಅಧ್ಯಕ್ಷ ಮುತ್ತಣ್ಣ ಗದುಗಿನ, ಮಹಿಳಾ ಜಿಲ್ಲಾಧ್ಯಕ್ಷರಾದ ಸ್ವಾತಿ ಅಕ್ಕಿ, ಹಿರಿಯರಾದ ವಿಜಯಕುಮಾರ್ ಗಡ್ಡಿ, ಮೋಹನ ಮಾಳಶೆಟ್ಟಿ, ಅಶೋಕ ಸಂಕಣ್ಣವರ, ಶಾಂತಣ್ಣ ಮುಳವಾಡ, ಪ್ರಮುಖರಾದ ಸಿದ್ದಣ್ಣ ಬಂಡಿ, ವಿಶ್ವನಾಥ ಜಿಡ್ಡಭಾಗಲ, ಕೆ.ಸಿ. ರಾಚನಗೌಡ್ರ, ಶಿವರಾಜ್ ಅಸುಂಡಿ, ಪ್ರವೀಣ್ ಆಚಾರ್ಯ, ಭದ್ರೇಶ ಕುಸಲಾಪೂರ, ಬಿ.ಎಸ್. ಚಿಂಚಲಿ, ಮಾಂತೇಶ ಹೀರೇಮನಿಪಾಟೀಲ, ಮಹೇಶ ಕರಿಬಿಷ್ಠಿ, ಈರಣ್ಣ ಕರಿಬಿಷ್ಠಿ, ಕೆ.ಕೆ. ಮಾಳಗೌಡ್ರ, ಬಸವರಾಜ ಗಡ್ಡೆಪ್ಪನವರ, ಎಮ್.ಬಿ. ಮತ್ತೂರು, ನಿಂಗಪ್ಪ ಹುಗ್ಗಿ, ಮಂಜುನಾಥ ಗುಡದೂರ, ಬೂದಪ್ಪ ಅಂಗಡಿ, ವಿರೂಪಾಕ್ಷಪ್ಪ ಬಳ್ಳೋಳ್ಳಿ, ನಾಗರಾಜ ಮದ್ನೂರ, ಶಿವಪ್ಪ ಬಾಳಿಕಾಯಿ, ರಮೇಶ ಗೊಳಗೊಳಕಿ, ಶರಣಪ್ಪ ಗೊಳಗೊಳಕಿ ಮುಂತಾದವರು ಭಾಗವಹಿಸುತ್ತಿದ್ದಾರೆ ಎಂದು ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಅಂಗಡಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.



