ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಗುರು ಗಂಧರ್ವ ಸಂಗೀತ ಸಭಾದಿಂದ ನ.30ರ ಮಧ್ಯಾಹ್ನ 3.30ಕ್ಕೆ ಎಪಿಎಂಸಿ ವರ್ತಕರ ಸಭಾ ಭವನ(ಎಸ್ಬಿಐ ಬ್ಯಾಂಕ್ ಮೇಲೆ)ದಲ್ಲಿ ಹಿಂದೂಸ್ತಾನಿ ಶಾಸ್ತಿçÃಯ ಸಂಗೀತೋತ್ಸವ ಜರುಗಲಿದೆ.
ಕುಂದಗೋಳದ ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆಯ ಅಧ್ಯಕ್ಷ ಅರವಿಂದ ಕಟಗಿ ಕಾರ್ಯಕ್ರಮ ಉದ್ಘಾಟಿಸುವರು. ಈರಮ್ಮ ಭಜಂತ್ರಿ ಅಧ್ಯಕ್ಷತೆ ವಹಿಸುವರು. ಸಾಹಿತಿಗಳಾದ ಕೆ.ಎಸ್. ಕೊಡ್ಲಿವಾಡ, ನಾಗರಾಜ ಹಣಗಿ ಅತಿಥಿಗಳಾಗಿ ಆಗಮಿಸುವರು. ಸಂಗೀತ ಕಲಾವಿದರಾದ ಸಿರಸಿಯ ರೇಖಾ ದಿನೇಶ, ಲಕ್ಷೆö್ಮÃಶ್ವರದ ಪರಶುರಾಮ ಭಜಂತ್ರಿ, ಡಾ. ಅರ್ಜುನ ವಠಾರ, ಕೃಷ್ಣಕುಮಾರ ಕುಲಕರ್ಣಿ, ಸಾರಂಗ ಕುಲಕರ್ಣಿ, ಶ್ರೀಹರಿ ದಿಗ್ಗಾವಿ, ಅನಂತ ಪಾವಣಸ್ಕರ, ಶೀವಸ್ವಾಮಿ ಹಿರೇಮಠ, ಅಕ್ಷಯ ಕುಮಾರ ಭಜಂತ್ರಿ ಮತ್ತು ಗುರು ಗಂಧರ್ವ ಸಂಗೀತ ಶಾಲೆ ವಿದ್ಯಾರ್ಥಿಗಳು ಸಂಗೀತ ಸೇವೆಗೈಯುವರು ಎಂದು ಪ್ರಕಟಣೆ ತಿಳಿಸಿದೆ.



