ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ದೇವಾಂಗ ಸಮಾಜ ಸಮಾನ ಮಾನಸ್ಕರ ವೇದಿಕೆ ವತಿಯಿಂದ 9ನೇ ಕಾರ್ತಿಕೋತ್ಸವ ಕಾರ್ಯಕ್ರಮ ನಗರದ ಹಳೇಬನಶಂಕರಿ ದೇವಸ್ಥಾನದ ಆವರಣದಲ್ಲಿ ಶ್ರೀ ಶಂಕರಾನಂದ ಸ್ವಾಮೀಜಿಯವರ ಸಮ್ಮುಖದಲ್ಲಿ ಸಮಾಜ ಬಾಂಧವರಿಂದ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಮುಕ್ಕಣ್ಣೇಶ್ವರ ಮಠದ ಶ್ರೀ ಶಂಕರಾನಂದ ಸ್ವಾಮೀಜಿಯವರ ಆಶೀರ್ವಚನ ನೀಡುತ್ತ, ದೀಪದಿಂದ ದೀಪ ಹಚ್ಚುವ ಈ ಕಾರ್ತಿಕೋತ್ಸವ ಕಾರ್ಯಕ್ರಮವು ದೇವಾಂಗ ಸಮುದಾಯದ ಸಮಾಜಮುಖಿ ಕಾರ್ಯವಾಗಿದೆ. ಇಂತಹ ಧಾರ್ಮಿಕ ಕಾರ್ಯಗಳು ಆಗಾಗ ನಡೆಯುವುದರಿಂದ ಜನತೆಯಲ್ಲಿ ಶಾಂತಿ-ಸಾಮರಸ್ಯ ಮೂಡಲು ಸಾಧ್ಯವಾಗುತ್ತಿದೆ ಎಂದರು.
ದೇವಾಂಗ ಸಮಾಜದ ಸ.ಮ.ವೇ. ಗೌರವಾಧ್ಯಕ್ಷರಾದ ರತ್ನಾ ಘಾರ್ಗಿ ದೇವಾನು ದೇವತೆಗಳಿಗೆ ವಸ್ತçವನ್ನು ನೀಡಿದ ದೇವಲ ಮಹರ್ಷಿಯ ಅವತಾರಗಳ ಬಗ್ಗೆ ವಿವರವಾಗಿ ಮಾತನಾಡಿದರು. ಕೆ.ಜಿ.ಕೆ. ಚಾರಿಟೇಬಲ್ ಟ್ರಸ್ಟ್ ಖಜಾಂಚಿ ಕವಿತಾ ಕೇಶವರಾಮ ಕೊಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಅನಸೂಯಾ ದೇವಾಂಗಮಠ, ಭಾರತಿ ಗಡ್ಡಿ, ಸುಜಾತಾ ಕಾಕಂಡಕಿ, ಸುಭಾಸಚಂದ್ರ ಪೆಂಟಾ ಮಾತನಾಡಿದರು. ವೇದಿಕೆಯ ಮೇಲೆ ರತ್ನಾ ಘಾರ್ಗಿ, ಭಾರತಿ ಗಡ್ಡಿ, ಕವಿತಾ ಕೊಳ್ಳಿ, ಡಾ. ಅನಸೂಯಾ ದೇವಾಂಗಮಠ, ಸುಜಾತಾ ಕಾಕಂಡಕಿ, ಶೋಭಾ ಭಾರದ್ವಾಡ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೇಶವರಾಮ ಕೊಳ್ಳಿ, ರಾಘವೇಂದ್ರ ಕೊಪ್ಪಳ, ಶಿವಾನಂದ ಗಿಡ್ನಂದಿ, ನಿರ್ಮಲ ಕೊಳ್ಳಿ, ಪುಷ್ಪಾ ಗುಗ್ಗರಿ, ಶಾಂತಾ ಗುತ್ತಿ, ಶೈಲಜಾ ಗಿಡ್ನಂದಿ, ವಜ್ರಾ ಪೆಂಟಾ, ರತ್ನಾ ಚಳಗೇರಿ ಸೇರಿದಂತೆ ಸಮಾಜದ ಎಲ್ಲ ಬಾಂಧವರು ಹಾಜರಿದ್ದರು.
ರಕ್ಷಿತಾ ಶಿವಾನಂದ ಗಿಡ್ನಂದಿ ನಿರೂಪಿಸಿದರು. ಭಾಗ್ಯಶ್ರೀ ಆರಿ ಪ್ರಾರ್ಥನೆಗೈದರು. ಶಿಲ್ಪಾ ಕೊಪ್ಪಳ ವಂದಿಸಿದರು.



