ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕ ಪ್ರಾಂತ ಕಾರ್ಯಾಲಯ ಧರ್ಮಸಿರಿಯಲ್ಲಿ ವಿಶ್ವ ಹಿಂದೂ ಪರಿಷತ್ ಅಖಿಲ ಭಾರತ ಸಹಮಂತ್ರಿ ಅರುಣ ನಿಟ್ಕೆ, ಪ್ರಾಂತ ಉಪಾಧ್ಯಕ್ಷ ಡಾ. ರಾಮನಗೌಡ್ರ, ಗೋವರ್ಧನರಾವ್, ಬಸವರಾಜ ಜೀ, ಪ್ರಾಂತ ಸಹ ಕಾರ್ಯದರ್ಶಿ ವಿನಾಯಕ ತಲಗೇರಿ, ವಿಭಾಗ ಕಾರ್ಯದರ್ಶಿ ರಮೇಶ ಕದಂ, ಮಹಾಬಲೇಶ್ವರ ಹೆಗ್ಡೆ ಇವರ ಮಾರ್ಗದರ್ಶನದಲ್ಲಿ ನಡೆದ ಧಾರವಾಡ ವಿಭಾಗ ವಿಶ್ವ ಹಿಂದೂ ಪರಿಷತ್ ಬೈಠಕನಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗದಗ ಜಿಲ್ಲಾ ಸಾಮಾಜಿಕ ಸಾಮರಸ್ಯದ ಪ್ರಮುಖರಾಗಿ ಯಶವಂತ ಕಾಂಬಳೇಕರ, ಧರ್ಮಾಚಾರ್ಯ ಸಂಪರ್ಕ ಪ್ರಮುಖರಾಗಿ ಬಸವರಾಜ ಅರಳಿ, ದುರ್ಗಾವಾಹಿನಿ ಸಂಚಾಲಕಿಯಾಗಿ ನಿಖಿತಾ ಸುತಾರ, ಗದಗ ನಗರ ತಾಲೂಕಾಧ್ಯಕ್ಷರಾಗಿ ರಾಘವೇಂದ್ರ ಬಾಂಢಗೆ, ಸಹ ಕಾರ್ಯದರ್ಶಿಯಾಗಿ ಕಾರ್ತಿಕ ಪರ್ವತಗೌಡರ, ಗದಗ (ಗ್ರಾಮಾಂತರ) ತಾಲೂಕಾಧ್ಯಕ್ಷರಾಗಿ ವಿರೇಶ ಮಡಿವಾಳರ, ಗದಗ ತಾಲೂಕಾ ಮಾತೃ ಶಕ್ತಿ ಪ್ರಮುಖರಾಗಿ ಕೌಶಲ್ಯ ಬದಿ, ಸತ್ಸಂಗ ಪ್ರಮುಖರಾಗಿ ಅರುಣಾ ಗುಂಡಗಟ್ಟಿ, ಸಹ ಸತ್ಸಂಗ ಪ್ರಮುಖರಾಗಿ ಲತಾ ದುರ್ಗಾವಾಹಿನಿ, ಸಹ ಸಂಯೋಜಕಿಯಾಗಿ ಅಮೂಲ್ಯ ಸಂಶಿ, ಕಾರ್ಯದರ್ಶಿ ಸದಸ್ಯರಾಗಿ ಸುಂದರಾಬಾಯಿ ಧರ್ಮದಾಸ ಆಯ್ಕೆಯಾದರು.
ನ.28ರಂದು ಸಾಯಂಕಾಲ 4.30ಕ್ಕೆ ಗದುಗಿನ ಪಂಚಮುಖಿ ಆಂಜನೇಯ ದೇವಸ್ಥಾನದ ಹತ್ತಿರವಿರುವ ಸೇವಾ ಚೇತನದಲ್ಲಿ ಸಭೆ ಕರೆದಿದ್ದು, ವಿಶ್ವ ಹಿಂದೂ ಪರಿಷತ್ತಿನ ಅಖಿಲ ಭಾರತ ಮಠ ಮಂದಿರ ಏವಂ ಅರ್ಚಕ, ಪುರೋಹಿತ ಮಂಡಳಿಯ ಪ್ರಮುಖರಾದ ಅರುಣ ನೆಟಕೆ ಮಾರ್ಗದರ್ಶನ ಮಾಡಲಿದ್ದಾರೆ. ಗದಗ ಜಿಲ್ಲೆಯ ಅರ್ಚಕ-ಪುರೋಹಿತರು, ದೇವಸ್ಥಾನ ಟ್ರಸ್ಟಿಗಳು ಭಾಗವಹಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಮಠ ಮಂದಿರ ಏವಂ ಅರ್ಚಕ ಪುರೋಹಿತ ಪ್ರಮುಖರಾದ ಮಂಜುನಾಥ ಹೆಗಡೆ ವಿನಂತಿಸಿದ್ದಾರೆ.



