ಬಿಜೆಪಿ ಮನೆಯೊಂದು ಮೂರು ಬಾಗಿಲು ವಿಚಾರ: ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದೇನು!?

0
Spread the love

ಗದಗ:- ಬಿಜೆಪಿ ಮನೆಯೊಂದು ಮೂರು ಬಾಗಿಲು ವಿಚಾರವಾಗಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Advertisement

ಈ ಸಂಬಂಧ ಗದಗನಲ್ಲಿ ಮಾತನಾಡಿದ ಕೆಎಸ್ ಈಶ್ವರಪ್ಪ, ಹಲವಾರು ವರ್ಷಗಳಿಂದ ತಪಸ್ಸು ಮಾಡಿ ಕಟ್ಟಿರುವ ಪಕ್ಷ ಬಿಜೆಪಿ. ಬಿಜೆಪಿಯಲ್ಲಿನ ಸದ್ಯದ ಬೆಳವಣಿಗೆಯನ್ನ ಹೈ ಕಮಾಂಡ್ ಗಮನಿಸುತ್ತಿದೆ. ಇದು ಶುದ್ಧೀಕರಣ ಆಗಬೇಕು ಅನ್ನೋದು ಕಾರ್ಯಕರ್ತರ ಅಪೇಕ್ಷೆ ಇದೆ. ಶುದ್ಧೀಕರಣ ಆಗುತ್ತೆ ಎಂಬ ನಂಬಿಕೆ ಇದೆ.

ಮೋದಿಯವರು ಕುಟುಂಬ ರಾಜಕಾರಣಕ್ಕೆ ಬೆಂಬಲಿಸಲ್ಲ ಅಂದವರು ಆದರೆ ಕರ್ನಾಟಕದಲ್ಲಿ ಇದು ನಡೆಯುತ್ತಿದೆ. ಇನ್ನೂ ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ಮಗನೇ ಸಿಎಂ ಸಹಿ ಮಾಡ್ತಿದ್ದ ಅಂತ ಆರೋಪ ಇದೆ. ಸಿದ್ಧಾಂತದ ಹಿನ್ನೆಲೆ ಕಟ್ಟಿರುವ ಪಕ್ಷ, ಸಿದ್ಧಾಂತ ಸರಿ ಹೋಗುತ್ತದೆ. ಹಿಂದುತ್ವ, ಕುಟುಂಬ ರಾಜಕಾರಣ, ಹೊಂದಾಣಿಕೆ ರಾಜಕಾರಣ ಎಲ್ಲವೂ ಹೋದ್ರೆ ಪಕ್ಷ ಉಳಿಯುತ್ತೆ ಎಂದರು.

ಇನ್ನೂ ಕ್ರಾಂತಿ ವೀರ ಬ್ರಿಗೇಡ್ ಅಂತ ಸಾದು ಸಂತರು ಸೇರಿ ನಾಮಕರಣ ಮಾಡಿದ್ದಾರೆ. ನಾಳೆ ಬಸವನಬಾಗೇವಡಿಯಲ್ಲಿ ಪೂರ್ವ ಭಾವಿ ಸಭೆ ಮಾಡ್ತಿದ್ದೇವೆ. ಫೆಬ್ರವರಿ4 ರಂದು ಹೊಸ ಕಮಿಟಿ ಘೋಷಣೆ ಮಾಡಲಾಗುತ್ತದೆ. ಅಂದು ಸಾವಿರ ಜನ ಸಾದು ಸಂತರಿಗೆ ಪಾದ ಪೂಜೆ ಮಾಡ್ತೇವೆ. ಶುದ್ಧೀಕರಣ ಆದ ಬಳಿಕ ನೋಡ್ತೇನೆ. ಪ್ರಾಣ ಹೋದರೂ ಬಿಜೆಪಿ ಬಿಡಲ್ಲ. ಹಿಂದುತ್ವವೇ ನನ್ನ ಉಸಿರು ಎಂದರು.


Spread the love

LEAVE A REPLY

Please enter your comment!
Please enter your name here