ಕಳ್ಳರ ಕರಾಮತ್ತು: ರಾತ್ರೋರಾತ್ರಿ ಮೊಬೈಲ್ ಅಂಗಡಿ ಲೂಟಿ ಮಾಡಿದ ಖದೀಮರು

0
Spread the love

ಬೆಂಗಳೂರು: ಖತರ್ನಾಕ್ ಖದೀಮರು ಚೀಲ‌ ತಂದು ಇಡೀ ಮೊಬೈಲ್ ಅಂಗಡಿ ದೋಚಿದ ಘಟನೆ ಶಿವಾಜಿನಗರದ ವಿಶ್ವಾಸ್ ಕಮ್ಯೂನಿಕೆಷನ್ ಅಂಗಡಿಯಲ್ಲಿ ನಡೆದಿದೆ. ಮುಖಕ್ಕೆ ಮಾಸ್ಕ್ ತಲೆಗೆ ಹ್ಯಾಟ್ , ಕೈಗೆ ಗ್ಲೋಸ್ ಹಾಕೊಂಡು ಶೆಟರ್ ಮುರಿದು ಎಂಟ್ರಿ ಕೊಟ್ಟಿರೋ‌ ಕಳ್ಳರು, ಸುಮಾರು 2 ಲಕ್ಷ ರೂಪಾಯಿ ನಗದು ಹಾಗೂ ಲಕ್ಷಾಂತರ ಮೌಲ್ಯದ 55 ಮೊಬೈಲ್ ಫೋನ್  ದೋಚಿದ್ದಾರೆ.

Advertisement

ಅಂಗಡಿ ದೋಚುವ ದೃಶ್ಯ ಸಿಸಿ ಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. ಶೆಟರ್ ಮುರಿದು ಒಳಗೆ ನುಗ್ಗಿದ ಇಬ್ಬರು ಮಾಸ್ಕ್ ಧರಿಸಿದ ವ್ಯಕ್ತಿಗಳಿಂದ ಡಿಸೆಂಬರ್ 11ರ ಬೆಳಗಿನ ಜಾವ 3.25ರ ಸುಮಾರಿಗೆ ‌ಘಟನೆ ನಡೆದಿದೆ.

ಅಂಗಡಿಯಲ್ಲಿದ್ದ ಸುಮಾರು 55 ಮೊಬೈಲ್ ಫೋನ್ ಚೀಲಕ್ಕೆ ತುಂಬಿಕೊಂಡಿದ್ದಾರೆ. ಶೋರೂಂನಲ್ಲಿದ್ದ ಎಲ್ಲಾ ಹೊಸ ಮೊಬೈಲ್ ಗಳನ್ನ ಚೀಲಕ್ಕೆ ತುಂಬಿಕೊಂಡ ಖದೀಮರು ಬಳಿಕ ಡ್ರಾನಲ್ಲಿ ಇಟ್ಟಿದ್ದ ಎರಡು ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ.‌ಈ ಬಗ್ಗೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಮೇಲೆ ಎಫ್.ಐ.ಆರ್ ದಾಖಲಾಗಿದೆ.

 


Spread the love

LEAVE A REPLY

Please enter your comment!
Please enter your name here