ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರ ಕನಸು ನನಸಾಗಲು ಪಾಲಕರ ಸಹಾಯ ಸಹಕಾರ ಅವಶ್ಯವಾಘಿದೆ ಎಂದು ಸನ್ಮಾರ್ಗ ಪದವಿಪೂರ್ವ ಮಹಾವಿದ್ಯಾಯದ ನಿರ್ದೇಶಕ ಪ್ರೊ. ರೋಹಿತ ಒಡೆಯರ್ ಅಭಿಪ್ರಾಯಪಟ್ಟರು.
ಅವರು ಸನ್ಮಾರ್ಗ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿಜ್ಞಾನ ಹಾಗೂ ವಾಣಿಜ್ಯ ವಿದ್ಯಾರ್ಥಿಗಳ ಪಾಲಕರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ಇಂದಿನ ವಿದ್ಯಾರ್ಥಿಗಳು ಪಾಠದಲ್ಲಿ ಪ್ರಗತಿ ಸಾಧಿಸಿದ್ದಾರೆ. ಆದರೆ ಪಠ್ಯೇತರ ಚಟುವಟಿಕೆಗಳಲ್ಲಿ ಅನಾಸಕ್ತರಾಗಿದ್ದಾರೆ. ಆದ್ದರಿಂದ ಪಾಲಕರಾದ ತಾವು ತಮ್ಮ ಮಗುವಿನ ದೈಹಿಕ ಬೆಳವಣಿಗೆಯತ್ತಲೂ ಗಮನಹರಿಸಬೇಕೆಂದು ಸೂಚಿಸಿದರು.
ಪ್ರೊ. ಉಡುಪಿ ದೇಶಪಾಂಡೆ ಮಾತನಾಡುತ್ತಾ, ಈ ಬಾರಿ ಪಿ.ಯು ಬೋರ್ಡ್ನವರು ಅನುಸರಿಸುತ್ತಿರುವ ಪರೀಕ್ಷಾ ಪದ್ಧತಿಯನ್ನು ಪಾಲಕರಿಗೆ ಸವಿಸ್ತಾರವಾಗಿ ವಿವರಿಸಿದರಲ್ಲದೇ, ಮಹಾವಿದ್ಯಾಲಯದಲ್ಲಿ ಅದಕ್ಕೆ ಪೂರಕವಾಗಿ ಕೈಗೊಂಡ ಚಟುವಟಿಕೆಗಳನ್ನು ಸಭೆಗೆ ಸವಿಸ್ತಾರವಾಗಿ ಹೇಳಿದರು.
ಸಭೆಯಲ್ಲಿ ಮಹೇಶಗೌಡ ಟಿ.ಪಾಟೀಲ, ಶಂಕರ ಕಲಬುರ್ಗಿ, ಪುರಾಣಿಕ, ಶ್ವೇತಾ ಸಂಕನೂರ ಪಾಲಕರ ಪರವಾಗಿ ಮಾತನಾಡಿದರು. ವಾಣಿಜ್ಯ ವಿಭಾಗದ ಕೋ-ಆರ್ಡಿನೇಟರ್ ಪ್ರೊ. ಎಸ್.ಎಸ್. ವಜ್ರಬಂಡಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯ ಮೇಲೆ ಆಡಳಿತ ಮಂಡಳಿಯ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ, ಪ್ರಾಚಾರ್ಯ ಪ್ರೇಮಾನಂದ ರೋಣದ, ಆಡಳಿತಾಧಿಕಾರಿ ಎಂ.ಸಿ. ಹಿರೇಮಠ, ನಿರ್ದೇಶಕರಾದ ಪ್ರೊ. ರೋಹಿತ, ಪ್ರೊ. ರಾಹುಲ ಒಡೆಯರ, ಪ್ರೊ. ಪುನೀತ ದೇಶಪಾಂಡೆ, ಪ್ರೊ. ಸೈಯ್ಯದ್ ಮತಿನ್ ಮುಲ್ಲಾ ಉಪಸ್ಥಿತರಿದ್ದರು. ಪ್ರೊ. ಶ್ರೀಶುಭಾ ಶಿರಹಟ್ಟಿ ಸ್ವಾಗತಿಸಿದರೆ, ಪ್ರೊ. ವಿಜಯ ಹೆಬಸೂರ ವಂದಿಸಿದರು.