ಸಿಸೇರಿಯನ್ ಆದ ಕೆಲವೇ ಗಂಟೆಗಳಲ್ಲಿ ಬಾಣಂತಿ ದುರ್ಮರಣ: ವೈದ್ಯರು ಕೊಟ್ಟ ಕಾರಣ ಏನು?

0
Spread the love

ತುಮಕೂರು:- ಸಿಸೇರಿಯನ್ ಆದ ಕೆಲವೇ ಗಂಟೆಗಳಲ್ಲಿ ಬಾಣಂತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕು ಆಸ್ಪತ್ರೆಯಲ್ಲಿ ಜರುಗಿದೆ.

Advertisement

ಸಿಸೇರಿಯನ್ ಆದ ಕೆಲವೇ ಗಂಟೆಗಳಲ್ಲಿ ಬಾಯಿ, ಮೂಗಿನಲ್ಲಿ ರಕ್ತ ಬಂದು ಡಿ.ಜೆ.ಹಳ್ಳಿಯ ಮೋದಿ ರೋಡ್‌ ನಿವಾಸಿ 26 ವರ್ಷದ ಫಿರ್ದೋಸ್‌ ಎಂಬ ಬಾಣಂತಿ ಸಾವನ್ನಪ್ಪಿದ್ದಾರೆ.

ಫಿರ್ದೋಸ್​​, ಹೆರಿಗೆಗಾಗಿ ತಿಪಟೂರಿನ ಗಾಂಧಿನಗರದ ತವರು ಮನೆಗೆ ಹೋಗಿದ್ದರು. ಡಿ.27ರಂದು ಹೆರಿಗೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾಗಿದ್ದರು. ಎರಡನೇ ಮಗುವಿಗೆ ಸಿಸೇರಿಯನ್ ಮಾಡಿಸಿಕೊಂಡಿದ್ದ ಫಿರ್ದೋಸ್‌, ಬಳಿಕ ಕೆಮ್ಮು ಅತಿಯಾಗಿದೆ.

ಕೆಮ್ಮು ಕಫ ಜೋರಾಗಿದ್ದರಿಂದ ಮೂಗು ಮತ್ತು ಬಾಯಲ್ಲಿ ರಕ್ತ ಬರಲಾರಂಬಿಸಿತ್ತು. ಶನಿವಾರ ಮಧ್ಯರಾತ್ರಿ 2.30ರಲ್ಲಿ ಮೃತಪಟ್ಟಿದ್ದಾರೆ. ಇನ್ನು ಈ ಘಟನೆ ಬಗ್ಗೆ ವೈದ್ಯರನ್ನು ಕೇಳಿದರೆ, ಮಹಿಳೆಗೆ ಪಲ್ಮನರಿ ಎಂಬಾಲಿಸಮ್​ ಇದ್ದು, ಈ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎನ್ನುತ್ತಿದ್ದಾರೆ.

ಇನ್ನೂ ಕರ್ನಾಟಕದಲ್ಲಿ ಬಾಣಂತಿಯರ ಸಾವು ಮುಂದುವರಿದಿದೆ. ಬಳ್ಳಾರಿ, ಬೆಳಗಾವಿ, ಬೆಂಗಳೂರು ಬಳಿಕ ಇದೀಗ ತುಮಕೂರಿನಲ್ಲೂ ಬಾಣಂತಿ ಸಾವಾಗಿದೆ.


Spread the love

LEAVE A REPLY

Please enter your comment!
Please enter your name here