ಕಂದಾಯ ಇಲಾಖೆ ಸಾಫ್ಟ್​ವೇರ್ ಹ್ಯಾಕ್: ಕಿಡಿಗೇಡಿಗಳ ವಿರುದ್ಧ ದಾಖಲಾಯ್ತು FIR!

0
Be aware of cybercrime
Spread the love

ಬೆಂಗಳೂರು:- ಸೈಬರ್ ವಂಚಕರು ಕಾವೇರಿ‌ 2.0 ಸಾಫ್ಟ್​​​ವೇರ್​ನ್ನು ಹ್ಯಾಕ್ ಮಾಡಿದ್ದು, ಸದ್ಯ ಈ ಬಗ್ಗೆ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆಎ ದಯಾನಂದ್​ ದೂರು ನೀಡಿದ್ದಾರೆ.

Advertisement

ದೂರಿನ ಅನ್ವಯ ಕೇಂದ್ರ CEN ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಸರ್ವರ್ ಸಮಸ್ಯೆಯಿಂದ ಕೆಲ ದಿನಗಳಿಂದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಸ್ಥಗಿತವಾಗಿತ್ತು. ಹಾಗಾಗಿ ಐಜಿಆರ್ ಕೆಎ ದಯಾನಂದ್, ಪರಿಶೀಲನೆ ಮಾಡಿದಾಗ ಅಪರಿಚಿತರು ಕಾವೇರಿ 2.0 ಸಾಫ್ಟ್​​​ವೇರ್​ ಹ್ಯಾಕ್​ ಮಾಡಿರುವುದಲ್ಲದೇ, ವೆಬ್ಸೈಟ್ ಪ್ರವೇಶಿಸಿ ದತ್ತಾಂಶ ಕಳವು ಮಾಡಿ ನಕಲಿ ಖಾತೆಗಳನ್ನು ತೆರೆದಿರುವುದು ಪತ್ತೆ ಆಗಿದೆ.

ಸದ್ಯ ಈ ಘಟನೆಯೂ ಸರ್ಕಾರಿ ವ್ಯವಸ್ಥೆಗಳಲ್ಲಿನ ಸೈಬರ್‌ ಸುರಕ್ಷತೆಯ ದೋಷಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಕೃತ್ಯಗಳನ್ನು ತಡೆಗಟ್ಟಲು ಬಲವಾದ ಕಾನೂನು ಕ್ರಮಗಳ ಅಗತ್ಯವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿದೆ.


Spread the love

LEAVE A REPLY

Please enter your comment!
Please enter your name here