ವಿಜಯಸಾಕ್ಷಿ ಸುದ್ದಿ, ಗದಗ: ಬಸವಣ್ಣನವರು ಸಮಾನತೆ, ಸತ್ಯ, ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಅದರಂತೆ ಕಾರ್ಮಿಕರು ಕಾಯಕಕ್ಕೆ ಹೆಚ್ಚಿನ ಒತ್ತು ನೀಡಿ ತನ್ಮೂಲಕ ಆರ್ಥಿಕವಾಗಿ ಸುಧಾರಣೆಗೊಂಡು ಅವರ ಬದುಕು ಸುಂದರವಾಗಿ ರೂಪುಗೊಳ್ಳಲಿ ಎಂದು ಗದುಗಿನ ಜ. ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ ಹೇಳಿದರು.
ಅವರು ನಗರದ ಲಯನ್ಸ್ ಸಭಾಂಗಣದಲ್ಲಿ ಗದುಗಿನ ಕಾರ್ಮಿಕ ಕಲ್ಯಾಣ ಸಂಸ್ಥೆ ಏರ್ಪಡಿಸಿದ್ದ ವಿಶ್ವ ಸಂಶೋಧಕರ ದಿನಾಚರಣೆ, ಸಾಧಕ ಕಾರ್ಮಿಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವ ಕಾರ್ಮಿಕ ವರ್ಗದ ಶ್ರಮವನ್ನು ಮೆಚ್ಚಲೇಬೇಕು. ಕಾರ್ಮಿಕರ ಮಕ್ಕಳು ಕಾರ್ಮಿಕರಾಗದೇ ಒಳ್ಳೆ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ಪಡೆದು ಉನ್ನತ ಹುದ್ದೆಯನ್ನು ಪಡೆಯಲು ಮುಂದಾಗಬೇಕು. ವಿಶ್ವಕ್ಕೆ ಬೆಳಕು ನೀಡಿದ ಥಾಮಸ್ ಅಲ್ವಾ ಎಡಿಸನ್ ಜನ್ಮದಿನಾಚರಣೆಯನ್ನು ವಿಶ್ವ ಸಂಶೋಧಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿರುವ ಈ ಸಂದರ್ಭದಲ್ಲಿ ಆಯ್ದ ಸಾಧಕ ಕಾರ್ಮಿಕರಿಗೆ ಪ್ರಶಸ್ತಿ ನೀಡುವ ಮೂಲಕ ಅವರನ್ನು ಉತ್ತೇಜಿಸಿ ಗೌರವಿಸಿದ್ದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗದಗ ತಾಲೂಕಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಹಾಗೂ ಜಿ.ಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಮಾತನಾಡಿ, ನಿತ್ಯವೂ ತಮ್ಮ ಕಾಯಕ ಮಾಡಿಕೊಂಡು ಜೀವನ ನಡೆಸುತ್ತಿರುವ ಕಾರ್ಮಿಕರ ಬದುಕು ಕಷ್ಟದಾಯಕವಾಗಿದ್ದು, ಇಂತಹ ಕಾರ್ಮಿಕ ವರ್ಗದ ಶ್ರೇಯೋಭಿವೃದ್ಧಿಗೆ ಸರಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕರ್ನಾಟಕ ಮಾದ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹನುಮಾನಸಿಂಗ್ ಜಮಾದಾರ, ಎಲೆಕ್ಟಿçಕಲ್ ಇಂಜಿನಿಯರ್ ರಾಜಣಸಾ ಪವಾರ ಅವರನ್ನು ಸನ್ಮಾನಿಸಲಾಯಿತು.
ಸಾಧಕ ಕಾರ್ಮಿಕರಾದ ಮಲ್ಲಪ್ಪ ಅಂಗಡಿ, ಶಂಕ್ರಪ್ಪ ಕಮ್ಮಾರ, ಮಲ್ಲಪ್ಪ ಜೀವಣ್ಣವರ, ಮಾರುತಿ ಮೂಲಿಮನಿ, ರಫೀಕ್ ಅಂಗಡಿ, ಗಂಗಾಧರ ಚುಳಕಿ ಅವರಿಗೆ ವಿಶ್ವಕ್ಕೆ ಬೆಳಕು ನೀಡಿದ ಥಾಮಸ್ ಅಲ್ವಾ ಎಡಿಸನ್ ಜನ್ಮದಿನಾಚರಣೆಯ ಅಂಗವಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಸಂಸ್ಥೆಯ ನಿರ್ದೇಶಕ ಅಪ್ಪುರಾಜ ಭದ್ರಕಾಳಮ್ಮನಮಠ ಉಪಸ್ಥಿತರಿದ್ದರು. ಅಂಬುಜಾ ಪವಾರ ಪ್ರಾರ್ಥಿಸಿದರು. ನಿಂಗಪ್ಪ ಕಟ್ಟಿಮನಿ ಸ್ವಾಗತಿಸಿದರು, ಝಡ್.ಡಿ. ಬೇಲೇರಿ ಪರಿಚಯಿಸಿದರು. ನಾಶೀರ್ ಚಿಕೇನಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ಕೊನೆಗೆ ಯುಸೂಫ್ ಬೇಪಾರಿ ವಂದಿಸಿದರು.
ಸಮಾರಂಭದಲ್ಲಿ ಶಹಬ ಇಲಾಳ, ಖಾಜಾಸಾಬ ಗಬ್ಬೂರ, ಸಿ.ಕೆ. ಪಾಟೀಲ, ಚಾಂದಸಾಬ ಅಬ್ಬಿಗೇರಿ, ಅಡಿವೆಪ್ಪ, ಎಚ್.ಎಸ್. ಪಾಟೀಲ, ರಾಮು ಬಾಗಲಕೋಟಿ, ಶಬ್ಬೀರ ತಹಸೀಲ್ದಾರ, ಅಶೋಕ ಕ್ಷೀರಸಾಗರ, ಪರಶುರಾಮ ಶಿಂಧೆ, ಜಿಲಾನಿ ಗುಳಗುಂದಿ, ಜಾವೀದ್ ಹರ್ಲಾಪೂರ, ಶಿದ್ಧಿ ಮುಳಗುಂದ, ರಫೀಕ್ ಕರೇಕಾಯಿ, ಸಾಧಿಕ್ ಧಾರವಾಡ, ಜಬೀವುಲ್ಲಾ ಬೋದ್ಲೇಕಾನ್, ಅಲ್ಲಾಭಕ್ಷ ದೊಡ್ಡಮನಿ, ಅಸ್ಪಾಕ್ ಕೊಪ್ಪಳ, ಮೆಹಬೂಬ ಮೋಮಿನ್, ಅನ್ವರ್ ಬಳ್ಳಾರಿ, ವೈ.ಎನ್. ಗೌಡರ, ದುರಗಪ್ಪ ಗುಡಿಮನಿ, ಪ್ರಭಯ್ಯ ಹಿರೇಮಠ, ಮಲ್ಲಿಕಾರ್ಜುನ ಬೆಟಗೇರಿ, ಇಮಾಮಸಾಬ ಕದಡಿ, ಮೈನುದ್ದೀನ್ ಗುಜಮಾಗಡಿ, ಮೇಘರಾಜ ತುಳಸಿಮನಿ, ಖಾದರ್ ಬಳ್ಳಾರಿ, ಮುಸ್ತಾಕ ಮುಲ್ಲಾ, ಚಂದ್ರಕಾಂತ ಲಾಡ್ ಮುಂತಾದವರಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಮಹ್ಮದ್ಇರ್ಫಾನ್ ಡಂಬಳ ಮಾತನಾಡಿ, ಕಾರ್ಮಿಕ ಕಲ್ಯಾಣ ಸಂಸ್ಥೆಯು ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಕಾರ್ಮಿಕರು ಸಂಘಟನೆಯಾಗಬೇಕು. ಸಂಘಟನೆಯ ಬಲದಿಂದ ನಮ್ಮ ಕೆಲಸ-ಕಾರ್ಯಗಳನ್ನು ಸುಗಮವಾಗಿ ಮಾಡಿಕೊಳ್ಳಲು ಸಾಧ್ಯ ಎಂದರು.