ಬೆಂಗಳೂರು: ರಾಜ್ಯ ಸರ್ಕಾರಕ್ಕೂ ಮೆಟ್ರೋ ದರ ಏರಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎಲ್ಲಾ ಮೆಟ್ರೋಗಳು ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಅಡಿ ಬರುತ್ತದೆ. ಮೆಟ್ರೋಗಳಿಗೆ ಸಂಬಂಧಿಸಿದಂತೆ ಬೋರ್ಡ್ ಇರುತ್ತದೆ.
ದರ ಏರಿಕೆಗೆ ರಾಜ್ಯಗಳು ಕೇಂದ್ರಕ್ಕೆ ಪತ್ರ ಬರೆಯುತ್ತದೆ. ಪತ್ರ ಬರೆದ ಮೇಲೆ ಸಮಿತಿ ರಚನೆ ಮಾಡುತ್ತಾರೆ. ಬೆಂಗಳೂರು ಮೆಟ್ರೋ ಸಮಿತಿಯ ಅಧ್ಯಕ್ಷರು ನಿವೃತ್ತಿ ಜಡ್ಜ್ ತಾರಿಣಿ, ಕೇಂದ್ರದ ಪ್ರತಿನಿಧಿ ಸತೀಂದ್ರ ಪಾಲ್ ಸಿಂಗ್, ರಾಜ್ಯದ ಪ್ರತಿನಿಧಿ ರಮಣರೆಡ್ಡಿ ಇದ್ದರು. ಈ ಸಮಿತಿ ಸಭೆ ಮಾಡಿ ಎಷ್ಟು ಏರಿಕೆ ಆಗಬೇಕು ಅಂತ ತೀರ್ಮಾನ ಮಾಡುತ್ತದೆ. ರಾಜ್ಯ ಸರ್ಕಾರಕ್ಕೂ ಮೆಟ್ರೋ ದರ ಏರಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಮಿತಿಯವರು ಕೇಂದ್ರಕ್ಕೆ ವರದಿ ನೀಡುತ್ತಾರೆ. ದ್ರದ ನಗರಾಭಿವೃದ್ಧಿ ಸಚಿವಾಲಯ ದರ ಏರಿಕೆ ಆದೇಶ ನೀಡುತ್ತದೆ. ಮಂಡಳಿ ಒಪ್ಪಿಗೆ ಪಡೆದು ದರ ಏರಿಕೆ ಮಾಡಲಾಗುತ್ತದೆ. ರಾಜ್ಯ ಸರ್ಕಾರಕ್ಕೂ ದರ ಏರಿಕೆಗೂ ಯಾವುದೇ ಸಂಬಂಧವಿಲ್ಲ. ನಿಯಮದ ಪ್ರಕಾರ ಮಂಡಳಿಯ ಶಿಫಾರಸಿನ ಮೇಲೆ ದರ ಏರಿಕೆಯಾಗಿದೆ ಎಂದರು.