ವಿಜಯಸಾಕ್ಷಿ ಸುದ್ದಿ, ಗದಗ: ಮಾದಿಗ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವಂತೆ ಶ್ರೀ ನಿತ್ಯಾನಂದ ಸೇವಾ ಟ್ರಸ್ಟ್ ಗದಗ ವತಿಯಿಂದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಿದರು.
ಗೌರವಾಧ್ಯಕ್ಷ ವೀರಪ್ಪ ಕೋಟ್ನಿಕಲ್ ಮತ್ತು ಅಧ್ಯಕ್ಷ ವಿರೂಪಾಕ್ಷ ಪರಾಪೂರ, ವಿಜಯ ಕಲ್ಮನಿ ಮನವಿ ಸಲ್ಲಿಸಿ ಮಾತನಾಡಿ, ಮಾದಿಗ ಸಮುದಾಯಕ್ಕೆ ಮಂಗಲ ಕಾರ್ಯಕ್ರಮಗಳು ಹಾಗೂ ಸಮಾಜದ ಸಭೆ-ಸಮಾರಂಭಗಳನ್ನು ನೆರವೇರಿಸಲು ಸಮುದಾಯ ಭವನದ ಅವಶ್ಯಕತೆಯಿದ್ದು, ಸದರ ಸಮುದಾಯ ಭವನ ನಿರ್ಮಾಣ ಮಾಡಲು ಅವಳಿ ನಗರದ ಡಿ.ಸಿ. ಮಿಲ್ ಕಂಪೌಂಡ್ನಲ್ಲಿರುವ ಸಿ.ಟಿ.ಎಸ್. 3982ರಲ್ಲಿಯ ವಿನಾಯಕ ಬಡಾವಣೆಯಲ್ಲಿ ಸಾರ್ವಜನಿಕ ಸೌಕರ್ಯಕ್ಕಾಗಿ ಮೀಸಲಿಟ್ಟ ಖುಲ್ಲಾ ಜಾಗೆಯನ್ನು ಅಥವಾ ಸರ್ಕಾರದಿಂದ ಗದಗ ಹೃದಯ ಭಾಗದಲ್ಲಿ ನಿವೇಶನ ಮಂಜೂರು ಮಾಡಿಸಿಕೊಡಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಟ್ರಸ್ಟನ್ ಕಾರ್ಯದರ್ಶಿಗಳಾದ ಪುಂಡಲೀಕ ಕಲ್ಮನಿ, ಅಶೋಕ ಹಾದಿಮನಿ, ಮಂಜುನಾಥ ಕೋಟ್ನಿಕಲ್, ಅಶೋಕ ಕುಡತಿನ್ನಿ ಸೇರಿದಂತೆ ಮಾದಿಗ ಸಮುದಾಯದ ಗುರುಹಿರಿಯರು, ಯುವಕರು ಉಪಸ್ಥಿತರಿದ್ದರು.