ಪಂ. ಡಾ. ಪುಟ್ಟರಾಜ ಗವಾಯಿಗಳವರ ಜಯಂತ್ಯುತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ಡಾ. ವ್ಹಿ.ಬಿ. ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನ ಗದಗ ಹಾಗೂ ಅಶ್ವಿನಿ ಪ್ರಕಾಶನ ಗದಗ ವತಿಯಿಂದ ಪಂಡಿತ ಡಾ. ಪುಟ್ಟರಾಜ ಗವಾಯಿಗಳವರ 111ನೇ ಜಯಂತ್ಯುತ್ಸವದ ಪ್ರಯುಕ್ತ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ, ಕವಿಗೋಷ್ಠಿ ಮತ್ತು ಶ್ರೀಗಳಿಗೆ ತುಲಾಭಾರ ಕಾರ್ಯಕ್ರಮ ದಿನಾಂಕ ಮಾರ್ಚ್ 3ರಂದು ನಗರದ ಶ್ರೀ ಸಾಯಿ ಜ್ಞಾನಯೋಗಾಶ್ರಮದ ಎದುರಿನ ರಾಜಲಕ್ಷೀ ನಿಲಯದಲ್ಲಿ ಹಮ್ಮಿಕೊಂಡಿದೆ. ದಿವ್ಯ ಸಾನ್ನಿಧ್ಯವನ್ನು ಜಗದ್ಗುರು ಅನ್ನದಾನೇಶ್ವರರ ಸಂಸ್ಥಾನ ಶಾಖಾಮಠ ನರಸಾಪೂರದ ಡಾ. ಪರಮಪೂಜ್ಯ ಶ್ರೀ ವಿರೇಶ್ವರ ಶಿವಯೋಗಿಗಳು ವಹಿಸುವರು.

Advertisement

ಉದ್ಘಾಟಕರಾಗಿ ಡಾ. ಪಂಡಿತ ರಾಜಗುರು ಗುರುಸ್ವಾಮಿ ಕಲಕೇರಿ, ಅಧ್ಯಕ್ಷತೆಯನ್ನು ಡಾ ವ್ಹಿ.ಬಿ. ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನದ ವ್ಹಿ.ವ್ಹಿ. ಹಿರೇಮಠ, ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ ಗದಿಗಯ್ಯಾ ಭೃಂಗಿಮಠ ದಂಡೋತಿ, ಡಾ. ಶರಣಬಸವ ಎನ್.ವೆಂಕಟಾಪೂರ, ಕೆ.ಎಸ್.ಎಸ್. ಪದವಿ ಮಹಾವಿದ್ಯಾಲಯದ ಡಾ. ರಶ್ಮಿ ಅಂಗಡಿ ಪಾಲ್ಗೊಳ್ಳುವರು.

ವೀರಯ್ಯ ಹೊಸಮಠರಿಂದ ಸಂಗೀತ ಸೇವೆ, ನಾರಾಯಣ ವೀರಪ್ಪ ಹಿರೇಕೊಳ್ಳಜಿ ಸಭಾ ನಿರೂಪಣೆ ಮಾಡುವರು. ಮಹೇಶ ವಡ್ಡಿನ ಪಾಲ್ಗೊಳ್ಳುವರು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರಾದ ಪುಟ್ಟರಾಜ ಹಿರೇಮಠ, ಸುಷ್ಮಾ ಹಿರೇಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here