ಹಾವೇರಿ:- ಮಾಸೂರಿನ ಯುವತಿ ನರ್ಸ್ ಸ್ವಾತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸ್ವಾತಿ ಮನೆಗೆ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿದರು.
ಭೇಟಿ ವೇಳೆ ಸ್ವಾತಿ ಅವರ ತಾಯಿ ಶಶಿರೇಖಾ ಗೆ ಸಾಂತ್ವನ ಹೇಳಿದರು. ತಾಯಿ ಶಶಿರೇಖಾ ಅವರು, ಸಚಿವರು ಮನೆಗೆ ಬರ್ತಿದ್ದಂತೆ ಕಾಲಿಗೆ ಬಿದ್ದಿದ್ದು ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸಿ ಅಂತ ಅಳಲು ತೋಡಿಕೊಂಡಿದ್ದಾರೆ.
ಈ ವೇಳೆ ಶಶಿರೇಖಾ ಅವರಿಗೆ ಸಂತೈಸಿ ಅವರ ಕುಟುಂಬಸ್ಥರಿಗೆ ಸರ್ಕಾರದಿಂದ 5 ಲಕ್ಷ ಪರಿಹಾರದ ಚೆಕ್ ವಿತರಿಸಿದರು. ಜೊತೆಗೆ 1 ಲಕ್ಷ ರೂ. ವೈಯಕ್ತಿಕ ಪರಿಹಾರ ವಿತರಣೆ ಮಾಡಿದರು.
ಘಟನೆ ಹಿನ್ನೆಲೆ:-
ಇತ್ತೀಚೆಗೆ ಮಾಸೂರಿನ ಯುವತಿ ಸ್ವಾತಿ ಬರ್ಬರ ಹತ್ಯೆ ನಡೆದಿತ್ತು. ಇನ್ನೂ ಯುವತಿ ಸ್ವಾತಿ ಲವ್ ಜಿಹಾದ್ಗೆ ಬಲಿಯಾದಳಾ? ಹೀಗಂತ ಹಿಂದೂ ಪರ ಸಂಘಟನೆಗಳು ಸೇರಿದಂತೆ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಸದ್ಯ ಸ್ವಾತಿ ಹತ್ಯೆ ದೊಡ್ಡ ಸಂಚಲನ ಸೃಷ್ಟಿಸುತ್ತಲೇ ಪೊಲೀಸರ ತನಿಖೆ ಮತ್ತಷ್ಟು ತೀವ್ರಗೊಂಡಿದೆ.