ವಾಲ್ಮೀಕಿ ಆಶ್ರಮ ಶಾಲೆಗೆ ಲೋಕಾಯುಕ್ತ ಭೇಟಿ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲೂಕಿನ ನವೇಭಾವನೂರ ಗ್ರಾಮದಲ್ಲಿರುವ ಸರಕಾರಿ ವಾಲ್ಮೀಕಿ ಆಶ್ರಮ ಶಾಲೆಗೆ ಬುಧವಾರ ಗದಗ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಭೇಟಿಯ ಸಂದರ್ಭದಲ್ಲಿ ಸರಕಾರದಿಂದ ಮಂಜೂರಾದ ನೈಟ್‌ಡ್ರೆಸ್‌ಗಳು, ಟೀ-ಶರ್ಟ್, ಸಮವಸ್ತç, ಪರದೆ, ಹಾಸಿಗೆಗಳು, ಸೋಪ್ ಕಿಟ್, ನೋಟ್ ಪುಸ್ತಕ, ಯೋಗ ಮ್ಯಾಟ್‌ಗಳನ್ನು ಹಾಗೆ ಇಟ್ಟಿದ್ದು ಮಕ್ಕಳಿಗೆ ವಿತರಿಸಿಲ್ಲ. ಅಡುಗೆ ಕೋಣೆಯಲ್ಲಿ ಇಡ್ಲಿ ಮತ್ತು ಚಪಾತಿ ತಯಾರಿಸುವ ಯಂತ್ರಗಳಿದ್ದು, ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಯಂತ್ರ ಇದ್ದರೂ ಅದನ್ನು ಅಳವಡಿಸಿಲ್ಲ. ಊಟದ ತಟ್ಟೆ ಮತ್ತು ಗ್ಲಾಸ್‌ಗಳನ್ನು ಮಕ್ಕಳಿಗೆ ನೀಡಿಲ್ಲ. ಅಕ್ಕಿ ಚೀಲಗಳಲ್ಲಿ ಇಲಿಗಳು ಓಡಾಡಿ ಸಾಕಷ್ಟು ಪ್ರಮಾಣದಲ್ಲಿ ಇಲಿ ಹಿಕ್ಕೆಗಳು ಬಿದ್ದಿದ್ದು ಕಂಡುಬಂದಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಈ ಸಂದರ್ಭದಲ್ಲಿ ಗದಗ ಲೋಕಾಯುಕ್ತ ಪಿಐ ಎಸ್.ಎಸ್. ತೇಲಿ, ಟಿ.ಎನ್. ಜವಳಿ, ಆರ್.ಎಂ. ಹಳ್ಳಳ್ಳಿ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here