ಯತ್ನಾಳ್ ಬೆನ್ನಿಗೆ ನಿಂತ ಪಂಚಮಸಾಲಿ ಸಮುದಾಯ: ಬಿಜೆಪಿ ಹೈಕಮಾಂಡ್ ಗೆ ಗಡುವು!

0
Spread the love

ಬೆಳಗಾವಿ:- ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಹಿನ್ನೆಲೆ ಶಾಸಕ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿ ಕೇಂದ್ರ ಶಿಸ್ತು ಸಮಿತಿ ಆದೇಶ ಹೊರಡಿಸಿದೆ.

Advertisement

ಹೈಕಮಾಂಡ್ ನ ಈ ನಿರ್ಧಾರವನ್ನು ಕೆಲವರು ಸ್ವಾಗತಿಸಿದರೆ ಇನ್ನೂ ಕೆಲವರು ಪರೋಕ್ಷವಾಗಿ ಬೇಸರ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲದೇ ಶಾಸಕ ಯತ್ನಾಳ್ ಬೆನ್ನಿಗೆ ಪಂಚಮಸಾಲಿ ಸಮುದಾಯ ಬೆಂಬಲವಾಗಿ ನಿಂತಿದೆ.

ಈ ಬಗ್ಗೆ ಮಾತನಾಡಿದ ಜಯಮೃತ್ಯುಂಜಯ ಶ್ರೀಗಳು, ಏಪ್ರಿಲ್ 10ರ ಒಳಗೆ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ನೀಡಿದ ಉಚ್ಚಾಟನೆ ಆದೇಶವನ್ನು ಬಿಜೆಪಿ ವಾಪಸ್‌ ಪಡೆಯಬೇಕು.

ಉಚ್ಚಾಟನೆ ವಾಪಸ್ ಪಡೆಯದಿದ್ದರೆ ಏಪ್ರಿಲ್ 13 ರಂದು ಬೆಳಗಾವಿಯಲ್ಲಿ ದೊಡ್ಡ ಪ್ರತಿಭಟನೆ ನಡೆಸಿ ಶಕ್ತಿ ಪ್ರದರ್ಶನ ಮಾಡುತ್ತೇವೆ ಗುಡುಗಿದರು. ಈ ಸಭೆಗೆ ಎಲ್ಲಾ ಹಿಂದೂ ಪರ ಕಾರ್ಯಕರ್ತರು, ಸಮಾಜದ ಮುಖಂಡರು ಬರಬೇಕು. ಸಮಾಜದ ಶಾಸಕರು, ಸಂಸದರು ಕೂಡ ಸತ್ಯಾಂಶ ಹೇಳುವ ಕೆಲಸ ಮಾಡಬೇಕು. ಬೊಮ್ಮಾಯಿ, ಬೆಲ್ಲದ್, ರಮೇಶ್ ಜಾರಕಿಹೊಳಿ‌ ಅವರು ನೈತಿಕ ಬೆಂಬಲ ನೀಡಿದ್ದಾರೆ. ಸಮಾಜದ ಶಾಸಕರು ಒತ್ತಡ ಹಾಕದಿದ್ದರೆ ನಿಮ್ಮ ಮೇಲೆ ಸಮಾಜ ಬೇಸರವಾಗುತ್ತದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here