ರಾಯಚೂರಿನಲ್ಲಿ ಅಂಗನವಾಡಿ ಮಕ್ಕಳ ಮೊಟ್ಟೆ ಹಣದಲ್ಲಿ ಕಮಿಷನ್ ದಂಧೆ!

0
Spread the love

ರಾಯಚೂರು: ಗರ್ಭೀಣಿ ಮಹಿಳೆಯರು ಹಾಗೂ ಮಕ್ಕಳಿಗೆ ಸರ್ಕಾರವೇ ಉಚಿತವಾಗಿ ಪೌಷ್ಠಿಕ ಆಹಾರವಾದ ಮೊಟ್ಟೆ, ದವಸ-ಧಾನ್ಯಗಳು, ಸೇರಿದಂತೆ ಇನ್ನಿತರ ಪದ್ದಾರ್ಥವನ್ನು ಕೊಡುತ್ತದೆ. ಆದರೆ, ರಾಯಚೂರು ಜಿಲ್ಲೆ ದೇವದುರ್ಗ ಪಟ್ಟಣದಲ್ಲಿಅಂಗನವಾಡಿ ಮಕ್ಕಳ ಮೊಟ್ಟೆ ಹಣದಲ್ಲಿ ಕಮಿಷನ್ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

Advertisement

ನಿಯಮ ಉಲ್ಲಂಘಿಸಿ ಹಣ ವರ್ಗಾವಣೆ ಮಾಡಿದ್ದು, ಬಳಿಕ ಮೇಲ್ವೀಚಾರಕಿ ಮೂಲಕ ಹಣ ವಸೂಲಿ ಮಾಡಿರುವವಿಡಿಯೋ ವೈರಲ್ ಆಗಿದೆ. ಅಂಗನವಾಡಿ ಕಾರ್ಯಕರ್ತೆಯರಿಂದ ಮೊಟ್ಟೆ ಹಣದಲ್ಲಿ 50 % ಕಮಿಷನ್ ವಿಡಿಯೋ ವೈರಲ್‌ ಆಗಿದ್ದು, ಮೇಲ್ವೀಚಾರಕಿ ಕಮಲಾಕ್ಷಿ ವಿರುದ್ಧ ಹಣ ವಸೂಲಿ ಆರೋಪ ಕೇಳಿ ಬಂದಿದೆ.

ಕಮಲಾಕ್ಷಿ, ದೇವದುರ್ಗ ತಾಲ್ಲೂಕಿನ ಮಸರಕಲ್​ ವಲಯದ ಮೇಲ್ವೀಚಾರಕಿಯಾಗಿದ್ದು, ಈಕೆ ದೇವದುರ್ಗ ಮಾಜಿ ಸಚಿವ  ಕೆ ಶಿವನಗೌಡ ನಾಯಕ್ ಸಹೋದರಿ ಕೂಡ ಹೌದು. ಸಮಿತಿ ಮೂಲಕ ಮೊಟ್ಟೆ ಖರೀದಿಸೋದು ನಿಯಮವಾಗಿದೆ. ಆದರೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸುತ್ತೋಲೆಯ ನಿಯಮ ಉಲ್ಲಂಘನೆ ಮಾಡಿದ್ದಾರೆ. ಬಾಲ ವಿಕಾಸ ಸಮಿತಿಗೆ ಹಣ ಹಾಕದೇ ನೇರವಾಗಿ ಕಾರ್ಯಕರ್ತೆಯರಿಗೆ ಹಣ ವರ್ಗಾವಣೆ ಮಾಡಲಾಗಿದೆ.


Spread the love

LEAVE A REPLY

Please enter your comment!
Please enter your name here