ವಿಜಯಸಾಕ್ಷಿ ಸುದ್ದಿ, ಗದಗ
12 ಜನರ ಗುಂಪೊಂದು ಊರ ದ್ಯಾಮವ್ವನ ಗುಡಿ ಎದುರಿಗೆ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಲಕ್ಷ್ಮೇಶ್ವರ ಪೊಲೀಸರು ದಾಳಿ ಬಂಧಿಸಲಾಗಿದೆ.
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಗ್ರಾಮದ ದ್ಯಾಮವ್ವನ ಗುಡಿ ಎದುರಿಗೆ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ ಗ್ರಾಮದ ಪರಸಪ್ಪ ಹನಮಂತಪ್ಪ ಹುಣಸಿಮರದ, ಮಲ್ಲೇಶ್ ಈರಪ್ಪ ಕುಮಸಿ, ಬಸವಂತಪ್ಪ ಮಹಾದೇವಪ್ಪ ಕಾಳೆ, ರಾಮಪ್ಪ ಹನುಮಪ್ಪ ಹುಣಸಿಮರದ, ಮಹಾದೇವಪ್ಪ ಲಕ್ಷ್ಮಪ್ಪ ಪೂಜಾರ್, ನಿಂಗಪ್ಪ ಮೇಲಗಿರಿಯಪ್ಪ ಬನ್ನಿಕೊಪ್ಪ , ಶಿವಾನಂದ ಮಹಾದೇವಪ್ಪ ಮಾಯಣ್ಣವರ, ಈಶ್ವರಗೌಡ ಹನುಮಂತಗೌಡ ಪಾಟೀಲ್, ಯಲ್ಪಪ್ಪ ಬಸಪ್ಪ ಕಾಳೆ, ಬುಡ್ಡೆಸಾಬ್ ಇಮಾಮಸಾಬ್ ತೆಗ್ಗಿನಮನಿ, ಮಾಬುಸಾಬ ಮರ್ದಾನಸಾಬ್ ಗದಗಿನ, ಆನಂದ ಶಿವಪ್ಪ ಗೌಳಿ ಎಂಬುವವರನ್ನು ಬಂಧಿಸಲಾಗಿದೆ.

ಲಕ್ಷ್ಮೇಶ್ವರ ಪಿಎಸ್ಐ ಎಸ್ ವೈ ಲೋಹಾರ ಹಾಗೂ ಸಿಬ್ಬಂದಿ ಈ ದಾಳಿ ಮಾಡಿದ್ದರು. ಈ ಪ್ರಕರಣದಲ್ಲಿ ಯಾವುದೇ ಕೋವಿಡ್ ನಿಯಮಾವಳಿ ಉಲ್ಲಂಘನೆ ಆದ ಬಗ್ಗೆ ಮಾಹಿತಿ ಇಲ್ಲ. ಈ ಕುರಿತು ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.