ವಿಜಯಸಾಕ್ಷಿ ಸುದ್ದಿ, ಮುಳಗುಂದ: ದೈಹಿಕ ಹಾಗೂ ಮಾನಸಿಕ ಅಭಿವೃದ್ಧಿಗಾಗಿ ಕ್ರೀಡೆಯಲ್ಲಿ ಭಾಗವಹಿಸುವುದು ಅವಶ್ಯಕವಾಗಿದೆ ಎಂದು ಬಸವರಾಜ ಸುಂಕಾಪೂರ ಹೇಳಿದರು.
ಅವರು ಪಟ್ಟಣದ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಸಿದ್ದೇಶ್ವರ ಯುವಕ ಮಂಡಳ, ಡಿಪಿಇಪಿ ಶಾಲೆ ಹಾಗೂ ಆರ್ಎಂಎಸ್ಎ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ 17 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ಬೇಸಿಗೆ ಕ್ರೀಡಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಕ್ರೀಡಾಕೂಟದಲ್ಲಿ ಭಾಗವಹಿಸುವುದು ಮುಖ್ಯವಾಗಿದೆ. ಮಕ್ಕಳು ಪ್ರಾಥಮಿಕ ಹಂತದಲ್ಲೇ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದರು.
ಗಂಗಪ್ಪ ಸುಂಕಾಪೂರ, ಮಾಹಾದೇವಪ್ಪ ಹುಬ್ಬಳ್ಳಿ, ಮಾಹಾಂತೇಶ ನೀಲಗುಂದ, ಹೊನ್ನಪ್ಪ ನೀಲಗುಂದ, ಮಾಹಾಂತೇಶ ಕೆಂಚನಾಯ್ಕರ್, ಮಾಹಾದೇವಪ್ಪ ಮಾನೇಗಾರ, ವಿ.ಡಿ. ಸಿದ್ದನಗೌಡರ, ಎಸ್.ಎಚ್. ಪೂಜಾರ, ಪಂಪನಗೌಡ ನಾಯಕ್, ಬಸವರಾಜ ಗೌರಿಮನಿ, ನೂರಹ್ಮದ ನದಾಫ್, ದೈಹಿಕ ಶಿಕ್ಷಕ ವಿ.ಟಿ. ಅಂಗಡಿ ಇದ್ದರು.