ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಬಾಳೇಹೊಸೂರ ಗ್ರಾಮದಲ್ಲಿ ಎ.18 ಮತ್ತು 19ರಂದು ಶ್ರೀ ದಿಂಗಾಲೇಶ್ವರಮಠದ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎ.8ರಿಂದ 18ವರೆಗೆ ಶ್ರೀಮಠದಲ್ಲಿ ನಿತ್ಯ ಸಂಜೆ 7ಕ್ಕೆ ಹಾನಗಲ್ಲ ಶ್ರೀ ಕುಮಾರೇಶ್ವರ ಪುರಾಣ ಪ್ರವಚನ ನಡೆಯಲಿದೆ. ಬೀಳಗಿಯ ಶ್ರೀ ಸಂಗನಬಸವ ಶ್ರೀಗಳು ಪುರಾಣ ಪ್ರವಚನಗೈಯುವರು. ಶ್ರೀಮಠದ ಸರ್ವಜ್ವ ಗವಾಯಿಗಳು, ವಿರೇಶ್ವರ ಪುಣ್ಯಾಶ್ರಮದ ಕಲಾವಿದ ಪ್ರಕಾಶ ಸಂಗೀತ ಸೇವೆ ಮಾಡುವರು.
ಎ.18ರಂದು ಪ್ರಾತಃಕಾಲ ಶ್ರೀ ದಿಂಗಾಲೇಶ್ವರ ಕರ್ತೃ ಗುದ್ದುಗೆಗೆ ಮಹಾರುದ್ರಾಭೀಷೇಕ, ಲಿಂಗದೀಕ್ಷೆ, ಅಯ್ಯಾಚಾರ, ಷಟಸ್ಥಲ ಧ್ವಜಾರೋಹಣ, ಸಂಜೆ 5.30ಕ್ಕೆ ಮಹಾರಥೋತ್ಸವ ಜರುಗುವುದು. ಸಂಜೆ 7.30ಕ್ಕೆ ಪುರಾಣ ಮಂಗಲ ಹಾಗೂ ಧರ್ಮಸಭೆ ನಡೆಯಲಿದೆ.
ಎ.19ರಂದು ಸಂಜೆ 5.30ಕ್ಕೆ ಕಡುಬಿನ ಕಾಳಗವನ್ನು ಶ್ರೀ ಮಠ ಮತ್ತು ಶಿರಹಟ್ಟಿ ಭಾವೈಕ್ಯತಾ ಸಂಸ್ಥಾನಮಠದ ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ನೆರವೇರಿಸುವರು ಎಂದು ಪ್ರಕಟಣೆ ತಿಳಿಸಿದೆ.