ನನ್ನನ್ನು ಮುಗಿಸಲು ಹೋದ್ರೆ ರಾಜ್ಯದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ: ಶಾಸಕ ಯತ್ನಾಳ್

0
Spread the love

ವಿಜಯಪುರ: ಯತ್ನಾಳ್ ಮುಗಿಸಲು ಹೋದ್ರೆ ರಾಜ್ಯದಲ್ಲಿ ಬೆಂಕಿ ಬೀಳುತ್ತೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಯತ್ನಾಳ ಮುಗಿಸಲು ಸಂಚು ವಿಚಾರವಾಗಿ ವಿಜಯಪುರದಲ್ಲಿ ಮಾತನಾಡಿದ ಅವರು, ನನ್ನ ಮುಗಿಸೋಕೆ ಆಗಲ್ಲ.

Advertisement

ಯತ್ನಾಳ್ ಮುಗಿಸಲು ಹೋದ್ರೆ ರಾಜ್ಯದಲ್ಲಿ ಬೆಂಕಿ ಬೀಳುತ್ತೆ. ಪೊಲೀಸ್ ಇಲಾಖೆ ತನಿಖೆ ಮಾಡ್ತಿದೆ. ಇದ್ರ ಹಿಂದೆ ಯಾರಿದ್ದಾರೆ ಎನ್ನುವುದು ಹೊರ ಬರುತ್ತೆ. ಈ ಬಗ್ಗೆ ಎನ್ ಐ ಎ ತನಿಖೆಯಾಗಲಿ ಎಂದು  ಹೇಳಿದ್ದಾರೆ.

ಯತ್ನಾಳ್ ಬಿಜೆಪಿಗೆ ಮರು ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಯಾರನ್ನೂ ಸಂಪರ್ಕ ಮಾಡಿಲ್ಲ, ನನ್ನನ್ನೂ ಯಾರು ಸಂಪರ್ಕಿಸಿಲ್ಲ. ಬಿಜೆಪಿ ಯಾವ ನಾಯಕರ ಜೊತೆಗೆ ಸಂಪರ್ಕ ಇಲ್ಲ,

ನಾನು ಕೈಮುಗಿದು ದೈನ್ಯದಿಂದ ನನ್ನ ತೆಗೆದುಕೊಳ್ಳಿ ಎಂದು ಹೇಳಿಲ್ಲ. ಕಾಲ ಬರಲಿ… ನಾನೂ ರಾಜ್ಯದಲ್ಲಿ ಹಿಂದೂಗಳ ಸಂಘಟನೆ ಮಾಡುವೆ. ಹಿಂದೂ ಸಂಘಟನೆಗಳು ಕೈ ಮೇಲೆ ಎತ್ತಿ ಹಿಂದುತ್ವ ಪರ ಇರೋರಿಗೆ ಓಟು ಹಾಕ್ತೀವಿ ಎಂದಿವೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here