ಬೆಂಗಳೂರು: ರಾಜ್ಯದ ಜನರ ಜತೆ ಸರ್ಕಾರ ಆಟ ಆಡುವ ಕೆಲಸ ಮಾಡೋದು ಬೇಡ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ನಗರದಲ್ಲಿ ಜಾತಿ ಜನಗಣತಿ ವರದಿ ವಿಚಾರವಾಗಿ ಮಾತನಾಡಿದ ಅವರು, ಈಗಿನ ವರದಿ ಪಾರದರ್ಶಕವಾಗಿ ಮಾಡಿಲ್ಲ. ರಾಜ್ಯದ ಜನರ ಭಾವನೆಗಳಿಗೆ ಈ ವರದಿ ನೋವು ತಂದಿದೆ.
Advertisement
ಈ ವರದಿ ಮೂಲಕ ರಾಜ್ಯದ ಜನರ ಜತೆ ಸರ್ಕಾರ ಆಟ ಆಡುವ ಕೆಲಸ ಮಾಡೋದು ಬೇಡ. ಈ ವರದಿಗೆ ಕಾಂತರಾಜ್ ಅವರು ಸಹಿ ಹಾಕದೇ ಓಡಿ ಹೋದರು. ಇದು ಮಕ್ಕಿ ಕಾ ಮಕ್ಕಿ ವರದಿ. ಸಿದ್ದರಾಮಯ್ಯ ಅವರು ವರದಿ ವಾಪಸ್ ಪಡೆದು ಹೊಸ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಲಿ” ಎಂದರು.
“ಸಿಎಂ ಸಿದ್ದರಾಮಯ್ಯ ಜೊತೆ ನಾವೆಲ್ಲ ಬೆಳೆದವರು. ಕಾಂತರಾಜು ಸಹಿಯೇ ಹಾಕದಿರುವ ವರದಿ. ಕರ್ನಾಟಕದ ಜನರ ಭಾವನಾತ್ಮಕತೆ ಮೇಲೆ ಆಟ ಆಡೋದುಬೇಡ. ಪ್ರತಿಸಾರಿ ಹೀಗೆ ಮುಂದೂಡುವ ಕೆಲಸ ಮಾಡುವ ಬದಲು. ಈ ವರದಿಯನ್ನು ಕೈ ಬಿಟ್ಟು ಬೇರೆ ವರದಿ ಮಾಡಿ. ಹೊಸ ವರದಿ ಸಿದ್ದಪಡಿಸಿ ಜಾರಿಗೆ ತರುವಂತೆ ಆಗ್ರಹಿಸಿದ್ದಾರೆ