ಬೆಂಗಳೂರು: ದೇಶದ ಸಂರಕ್ಷಣೆಗಾಗಿ ಮೋದಿ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನಾಳೆ ಮಾಕ್ ಡ್ರಿಲ್ ನಡೆಸುವ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ದೇಶದ ಸಂರಕ್ಷಣೆಗಾಗಿ ಮೋದಿ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ.
ಆದರೆ ಜನರ ನಿರೀಕ್ಷೆಗೆ ತಕ್ಕ ಹಾಗೆ ಮಾಡಿ. ಏನೇ ನಿರ್ಧಾರ ತೆಗೆದುಕೊಂಡರೂ ನಾವು ಸಿದ್ದರಿದ್ದೇವೆ. ಕಾಂಗ್ರೆಸ್ ನಿಲುವು ಒಂದೇ. ಮೋದಿ ಏನೆಲ್ಲ ಹೇಳಿದ್ರೂ ಅದಕ್ಕೆ ತಕ್ಕಹಾಗೆ ನಡೆದುಕೊಳ್ಳಿ. ಲವ್ ಲೆಟರ್ ಬರೆಯುವುದು ನಿಲ್ಲಿಸಲಿ. ಮೂರು ನಾಲ್ಕು ಮೀಟಿಂಗ್ ಮಾಡಿದ್ದಾರೆ. ಏನು ನಿರ್ಧಾರ ತೆಗೆದುಕೊಳ್ತಾರೋ ತೆಗೆದುಕೊಳ್ಳಲಿ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಇಬ್ಬರೂ ಡಬಲ್ ಇಂಜಿನ್ ಸುಳ್ಳುಗಾರರು ಅಂತ ಛಲವಾದಿ ನಾರಾಯಣ ಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್ನವರು ಪ್ರೂವ್ ಮಾಡುವಂತೆಯೂ ಹೇಳಿದ್ದಾರೆ. ಅಂಬೇಡ್ಕರ್ ಅವರನ್ನು ಸಾವರ್ಕರ್ ಸೋಲಿಸಿದ್ದು ನಿಜವೇ ಆಗಿದ್ದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಅಂತ ಅವರು ಹೇಳಿದ್ದಾರೆ” ಎಂದು ಸಚಿವ ಖರ್ಗೆ ಹೇಳಿದರು.