ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಶ್ರೀಪ್ರಭು ರಾಜೇಂದ್ರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಕರ್ನಾಟಕ ವಿಶ್ವವಿದ್ಯಾಲಯ 2ನೇ ವಲಯ ಮಟ್ಟದ ಪುರುಷರ ಅಂತರ ಕಾಲೇಜು ವ್ಹಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
Advertisement
ವ್ಹಾಲಿಬಾಲ್ ಕ್ರೀಡಾಪಟುಗಳಾದ ಪಾಂಡುರಂಗ ಅಬ್ಬಿಗೇರಿ, ಕಾರ್ತಿಕ ನಾಯ್ಕ್, ಸಚಿನ ಸಂಗತಿ, ಆಕಾಶ ಜಂಗನವಾರಿ, ಪ್ರವೀಣ ಪಂತರ, ರಾಹುಲ್ ಅಳಗುಂಡಿ, ತರಬೇತುದಾರ ಶಂಕರ ಮುಧೋಳ, ವ್ಯವಸ್ಥಾಪಕ ವೆಂಕಪ್ಪ ಬಂಡಿ ಅವರಿಗೆ ಶ್ರೀಪ್ರಭು ರಾಜೇಂದ್ರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ, ಆಡಳಿತ ಮಂಡಳಿ, ಪ್ರಾಚಾರ್ಯ ಬಸವರಾಜ ವಸ್ತçದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.