IPL 2025: ನಾನು RCBಗೆ ಹೋಗಬಾರದು ಎಂದುಕೊಂಡಿದ್ದೆ ಎಂದು ಕ್ಯಾಪ್ಟನ್ ರಜತ್ ಪಾಟಿದಾರ್‌ ಹೇಳಿದ್ಯಾಕೆ..?

0
Spread the love

8 ದಿನಗಳ ಬಳಿಕ ಐಪಿಎಲ್ ಮಹಾ ಸಂಗ್ರಾಮದ ಮರು ಆರಂಭಕ್ಕೆ ಕೌಂಟ್​ಡೌನ್ ಶುರುವಾಗಿದೆ. ಮರು ಆರಂಭದ ಮೊದಲ ಪಂದ್ಯದಲ್ಲಿ ಮತ್ತದೇ ಕೊಲ್ಕತ್ತಾ ನೈಟ್​ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸವಾಲ್ ಎಸೆಯುತ್ತಿದೆ.

Advertisement

ಬೆಂಗಳೂರಿನ ಚಿನ್ನಸ್ವಾಮಿ ಬ್ಯಾಟಲ್​​ನಲ್ಲಿ ಆರ್​ಸಿಬಿ ಎದುರಿನ ಸೇಡಿಗೆ ಕೊಲ್ಕತ್ತಾ ಸನ್ನದ್ಧವಾಗಿದ್ರೆ, ಇತ್ತ ಗೆಲುವಿನ ನಾಗಲೋಟದ ಕನಸು ಕಾಣ್ತಿರುವ ಆರ್​ಸಿಬಿ, ಇವತ್ತೇ ಪ್ಲೇ ಆಫ್ ನೀಡಲು ಹಾತೊರೆಯುತ್ತಿದೆ.

ಇದರ ನಡುವೆ ತಂಡದ ನಾಯಕ ರಜತ್​ ಪಾಟಿದಾರ್​ ಆರ್​ಸಿಬಿ ಕುರಿತು ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಹೌದು, ಕಳೆದ 3 ವರ್ಷಗಳ ಹಿಂದೆ ನಡೆದಿದ್ದ ಘಟನೆಯ ಕುರಿತು ಪಾಡ್​ಕಾಸ್ಟ್​ನಲ್ಲಿ ಮಾತನಾಡಿದ್ದಾರೆ. “2022ರ ಮೆಗಾ ಹರಾಜಿಗೂ ಮುನ್ನ ಆರ್​ಸಿಬಿ ಕಡೆಯಿಂದ ನನಗೆ ಒಂದು ಸಂದೇಶ ಬಂದಿತ್ತು.

ನೀವು ಸಿದ್ಧರಾಗಿರಿ ನಾವು ನಿಮ್ಮನ್ನು ಆಯ್ಕೆ ಮಾಡುತ್ತೇವೆ ಎಂದು. ಈ ವೇಳೆ ನನ್ನ ಮನಸಿನ್ನಲ್ಲಿ ಗಾಢವಾದ ನಂಬಿಕೆ ಮೂಡಿದ್ದು ಈ ಸಲ ಆರ್​ಸಿಬಿ ತಂಡದ ಪರ ಕಣಕ್ಕಳಿಯುವೆ ಎಂದೇ ನಂಬಿದ್ದೆ. ಆದರೆ ಅದೆಲ್ಲ ಹುಸಿ ಆಯ್ತು. ತಂಡಕ್ಕೆ ಆಯ್ಕೆ ಮಾಡಲಿಲ್ಲ. ಇದು ನನಗೆ ಕೋಪ ತರಿಸಿದ್ದರ ಜೊತೆಗೆ ಭಾರೀ ನಿರಾಸೆ ಮೂಡಿಸಿತು.

ಇದರೊಂದಿಗೆ, ನಾನು ದೇಶೀಯ ಕ್ರಿಕೆಟ್‌ನ ಹಾದಿಯನ್ನು ಹಿಡಿದೆ. ಇಂದೋರ್‌ನಲ್ಲಿ ಪಂದ್ಯಗಳನ್ನು ಆಡುತ್ತಿರುವಾಗ, ಗಾಯಗೊಂಡ ಸಿಸೋಡಿಯಾ ಬದಲಿಗೆ ನಿಮ್ಮನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಆರ್‌ಸಿಬಿ ಕಡೆಯಿಂದ ಮತ್ತೆ ಕರೆ ಬಂದಿತು. ಆದರೆ ನಾನು ಆರ್​ಸಿಬಿಗೆ ತಿರುಗಿ ಹೋಗಬಾರದು ಎಂದುಕೊಂಡಿದ್ದೆ. ಗಾಯದಿಂದ ಆಟಗಾರ ಚೇತರಿಸಿಕೊಂಡರೇ ನಾನು ಡಗೌಟ್‌ಗೆ ಸೀಮಿತಗೊಳ್ಳಬೇಕಾಗುತ್ತದೆ ಎಂದು ಭಾವಿಸಿದ್ದೆ ಎಂದು ಪಾಟಿದಾರ್ ಹೇಳಿದರು.


Spread the love

LEAVE A REPLY

Please enter your comment!
Please enter your name here