ಶಿರಹಟ್ಟಿ: ಸರಳ ಸಜ್ಜನಿಕೆಗೆ ಮತ್ತು ಸಾರ್ವಜನಿಕ ವಲಯದಲ್ಲಿ ಅತ್ಯಂತ ಪ್ರೀತಿ ಪಾತ್ರರಾಗಿದ್ದ ಶಿರಹಟ್ಟಿಯ ಹಿರಿಯ ವೈದ್ಯ ಡಾ. ಟಿ.ಎಂ. ಮಹೇಂದ್ರಕರ (70) ಗುರುವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾದರು.
ಜಿಲ್ಲಾ ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷರಾಗಿಯೂ ಡಾ. ಟಿ.ಎಂ. ಮಹೇಂದ್ರಕರ ಸೇವೆ ಸಲ್ಲಿಸುತ್ತಿದ್ದರು. ಪಟ್ಟಣದ ಎಲ್ಲ ಸಮುದಾಯದವರೊಂದಿಗೂ ಅವಿನಾಭಾವ ಸಂಬಂಧವನ್ನು ಹೊಂದಿ ಪಟ್ಟಣದ ಬಹುತೇಕ ಎಲ್ಲ ಉತ್ಸವ-ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದರು. ಸುಮಾರು 5 ದಶಕಗಳ ಕಾಲ ಮನೆ ಮನೆಗೆ ಹೋಗಿ ರೋಗಿಗಳ ತಪಾಸಣೆ ನಡೆಸಿ ಅವರಿಗೆ ಚಿಕಿತ್ಸೆಯನ್ನು ನೀಡಿದ್ದರು. ಅನೇಕರಿಗೆ ಧನಸಹಾಯ, ಸಾಮಾಜಿಕ ಕಾರ್ಯಗಳಗೂ ಸಹಾಯಹಸ್ತ ನೀಡುತ್ತಿದ್ದರು. ಮೃತರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ.
ಮೃತರ ಅಂತ್ಯಕ್ರಿಯೆಯು ಅಪಾರ ಬಂಧು-ಬಳಗದ ಶೋಕದ ನಡುವೆ ಶುಕ್ರವಾರ ಮಧ್ಯಾಹ್ನ 2ರ ಸುಮಾರಿಗೆ ಶಿರಹಟ್ಟಿಯ ರುದ್ರಭೂಮಿಯಲ್ಲಿ ನೆರವೇರಿತು.
ಸಂತಾಪ: ಡಾ. ಟಿ.ಎಂ. ಮಹೇಂದ್ರಕರರ ಅಗಲಿಕೆಗೆ ಶಿರಹಟ್ಟಿಯ ಜ.ಫ. ಸಿದ್ದರಾಮ ಸ್ವಾಮೀಜಿ, ಜ.ಫ. ದಿಂಗಾಲೇಶ್ವರ ಸ್ವಾಮೀಜಿ, ವಿಶ್ವನಾಥ ಕಪ್ಪತ್ತನವರ, ಸಂದೀಪ ಕಪ್ಪತ್ತನವರ, ಅಜ್ಜು ಪಾಟೀಲ, ನಾಗರಾಜ ಲಕ್ಕುಂಡಿ, ಸಂತೋಷ ಕುರಿ, ಯಲ್ಲಪ್ಪ ಇಂಗಳಗಿ, ಅಕ್ಬರಸಾಬ ಯಾದಗಿರಿ, ಮಂಜುನಾಥ ಘಂಟಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.