ಹೆಣದ ಮುಂದೆ ಕಪ್‌ಗೆ ಮುತ್ತು ಕೊಟ್ಟುಕೊಂಡು ನಿಂತಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ!

0
Spread the love

ಬೆಂಗಳೂರು:- ಹೆಣದ ಮುಂದೆ ಕಪ್‌ಗೆ ಮುತ್ತು ಕೊಟ್ಟುಕೊಂಡು ನಿಂತಿದ್ದಾರೆ ಎಂದು ಸಿಎಂ, ಡಿಸಿಎಂ ವಿರುದ್ಧ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

Advertisement

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಸಂಭವಿಸಿದ ಕಾಲ್ತುಳಿತ ದುರಂತ ಪ್ರಕರಣ ಕುರಿತು ಮಾತನಾಡಿದ ಅವರು, ಅಪಾರ ಜನಸಂದಣಿಯಿಂದ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದಾರೆ. ಕ್ರೀಡಾಂಗಣಕ್ಕೆ ಹೋದ ಸಿಎಂ, ಡಿಸಿಎಂ, ಕಪ್‌ಗೆ ಮುತ್ತು ಕೊಡಲು ಹೋಗಿದ್ದಾರೆ. ಅಲ್ಲಿ ಹೆಣ ಬಿದ್ದಿದೆ, ಇವರು ಹೋಗಿ ಹೆಣದ ಮುಂದೆ ಕಪ್‌ಗೆ ಮುತ್ತು ಕೊಟ್ಟಿಕೊಂಡು ನಿಂತಿದ್ದಾರೆ. ಇವರೇ ಆರ್‌ಸಿಬಿ ಗೆಲ್ಲಿಸಿಕೊಂಡು ಕಪ್ ತೆಗೆದುಕೊಂಡು ಬರೋ ಥರ ಮಾಡಿದ್ದಾರೆ. ಕ್ರಿಕೆಟ್ ಅಭಿಮಾನಿಗಳ ಸಾವಿನ ನಡುವೆ ಮುತ್ತು ಕೊಟ್ಟಿಕೊಂಡು ನಿಂತಿದ್ದಾರೆ ಎಂದು ಸಿಎಂ ಮತ್ತು ಡಿಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಮೊನ್ನೆ ಒಂದು ರೀತಿಯ ಕುತೂಹಲ ಘಟಕ್ಕೆ ತಲುಪಿ ಆರ್‌ಸಿಬಿ ತಂಡ ಐಪಿಎಲ್ ಕಪ್ ಗೆದ್ದಿದೆ. ಇಂತಹ ಸಂದರ್ಭದಲ್ಲಿ ಇಷ್ಟೊಂದು ತರಾತುರಿಯಲ್ಲಿ ಸರ್ಕಾರದ ವತಿಯಿಂದ ಅಭಿನಂದನೆ ಸಲ್ಲಿಸಲು ತೀರ್ಮಾನ ಮಾಡಿದ್ದು ಯಾರು? ಅವರಿಗೆ ಇನ್ವಿಟೇಷನ್ ಕೊಟ್ಟಿದ್ದು ಯಾರು? ಅವರಿಗೆ ಸರ್ಕಾರ ಆಹ್ವಾನ ಕೊಟ್ಟಿದ್ದು ತಪ್ಪು ಅಂತಾಲೂ ನಾನು ಹೇಳಲ್ಲ. ಏರ್ ಪೋರ್ಟ್ನ ಡ್ರಾಮಾ ಕೂಡ ತೋರಿಸಿದ್ದೀರಿ. ಅಲ್ಲಿಗೆ ಯಾರು ಹೋದರು? ಆಯೋಜನೆ ಮಾಡಿದ್ದು ಯಾರು? ನಮ್ಮ ಡಿಸಿಎಂ ಅವರೇ ಬೆವರು ಸುರಿಸಿ ಕಪ್ ಗೆದ್ದಾರೋ ಅನ್ನೋ ತರ ಮುತುವರ್ಜಿಯಿಂದ ಹೋಗಿದ್ದಾರೆ. ಕನಕಪುರದವರನ್ನ ಕರೆದುಕೊಂಡು ಹೋಗಿದ್ದಾರೆ. ಬೇರೆ ಯಾರೂ ಹೋಗಿಲ್ಲ. ಇದು ಕನಕಪುರದ ಆರ್‌ಸಿಬಿನಾ? ಚೇಲಾಗಳು ಬೆಂಬಲಿಗರನ್ನ ಕರೆದುಕೊಂಡು ಹೋಗಿದ್ದಾರೆ ಡಿಕೆಶಿ ಎಂದು ಕಿಡಿಕಾರಿದರು.

ಈ ಸರ್ಕಾರ ಕಟುಕರ ಸರ್ಕಾರ. ಸಿಎಂ ನಿಷ್ಕ್ರಿಯ ಸಿಎಂ. ಡಿಸಿಎಂ ಮುಂದೆ ಸಿಎಂ ನಿಷ್ಕ್ರಿಯ. ಇನ್ನೂ ಹೋಮ್ ಮಿನಿಸ್ಟರ್ ಬಗ್ಗೆ ಮಾತಾಡೋದೇ ಬೇಡ. ಹೇಳು ಅಂದರೆ ಹೇಳ್ತಾರೆ ಇಲ್ಲಾಂದ್ರೆ ಇಲ್ಲ. ವಿಧಾನಸೌಧ ಮುಂದೆ ಕಾರ್ಯಕ್ರಮ ನಡೆಯುವಾಗಲೇ 4 ಜನರು ಸತ್ತಿದ್ದರು. ತರಾತುರಿಯಲ್ಲಿ ಮಾಡುವ ಅವಶ್ಯಕತೆ ಏನಿತ್ತು. ಆಗಲೇ ಕಾರ್ಯಕ್ರಮ ನಿಲ್ಲಿಸಬೇಕಿತ್ತು. ನಿನ್ನೆಯಿಂದಲೇ ಏನು ಅಂತಾ ಎಲ್ಲ ಗೊತ್ತಿತ್ತು. ವಿಧಾನಸೌಧ ಮುಂದೆಯೇ ಜನರು ಡಿಸಿಎಂಗೆ ಮರ್ಯಾದೆ ತೆಗೆದಿದ್ದಾರೆ. ಜನರು ನಿಮ್ಮನ್ನ ನೋಡಲು ಬಂದಿಲ್ಲ ಅಂತಾ ಎಂದು ವಾಗ್ದಾಳಿ ನಡೆಸಿದರು.


Spread the love

LEAVE A REPLY

Please enter your comment!
Please enter your name here