ಮರಕ್ಕೆ ಡಿಕ್ಕಿ ಹೊಡೆದು ಕಾರು ಮುಂಭಾಗ ಪುಡಿ-ಪುಡಿ: ಮೂವರು ಜಸ್ಟ್ ಮಿಸ್!

0
Spread the love

ಮೂಡಿಗೆರೆ : ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುದ್ರೆಮನೆ ಕಾಫಿ ಕ್ಯೂರಿಂಗ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಮರ್ಸಿಡಿಸ್ ಬೆನ್ಜ್ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ನಜ್ಜು ಗುಜ್ಜಾಗಿರುವ ಘಟನೆ ನಡೆದಿದೆ.

Advertisement

ಮರಕ್ಕೆ ಕಾರು ಗುದ್ದಿದ ಬಳಿಕ ಅಪಘಾತ ವಲಯ ನಿಧಾನವಾಗಿ ಚಲಿಸಿ ಎಂದು ಹಾಕಿರುವ ಎಚ್ಚರಿಕೆ ಬೋರ್ಡಿಗೂ ಗುದ್ದಿದೆ. ಹೀಗಾಗಿ ಕಾರಿನ ಮುಂಭಾಗ ಪುಡಿಯಾಗಿದೆ. ಘಟನೆಯಲ್ಲಿ ಕಾರಿನ ಏರ್ ಬ್ಯಾಗ್ ಓಪನ್‌ ಆಗಿದ್ದರಿಂದ ಮೂವರು ಯುವಕರು ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ.

ಬೆಂಗಳೂರು ನೋಂದಣಿ ಹೊಂದಿರುವ ಕಾರ್ ಇದಾಗಿದ್ದು, ಅಪಘಾತವಾಗುತ್ತಿದ್ದಂತೆ ನಂಬರ್ ಪ್ಲೇಟ್ ಕಿತ್ತು ಹಾಕಿ ಯುವಕರು ಪೊಲೀಸರಿಗೂ ದೂರು ನೀಡಿದೆ ತೆರಳಿದ್ದಾರೆ ಎನ್ನಲಾಗಿದೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here