Bangalore Crime: ಬೆಂಗಳೂರಿನಲ್ಲಿ ಮನೆಗಳ್ಳತನ ಮಾಡಿದ್ದ ಆರೋಪಿಗಳ ಬಂಧನ..!

0
Spread the love

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆಗಳ್ಳತನ ಮಾಡಿದ್ದ ಆರೋಪಿಗಳನ್ನು ಸಿ.ಕೆ.ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ. ಶಿವಪ್ರಸಾದ್,ಲಿಖಿತ್@ಕಡ್ಡಿ,ಜಯದೀಪ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳು ಕುಖ್ಯಾತ ಮನೆಗಳ್ಳ ಪೆಪ್ಸಿ ರಘು ಸಹಚರರು ಎಂದು ತಿಳಿದು ಬಂದಿದೆ. ಮೇ.21 ರಂದು ರಾತ್ರಿ ಕತ್ರಿಗುಪ್ಪೆ ನಿವಾಸಿ ವಿಶ್ವನಾಥ್ ಎಂಬುವವರು ಮನೆಯಲ್ಲಿ ಕಳ್ಳತನ ನಡೆದಿತ್ತು.

Advertisement

ವಿಶ್ವ ಮನೆಯವರು ಮದುವೆಗಾಗಿ ಚಿಕ್ಕಮಗಳೂರಿಗೆ ಹೋಗಿದ್ರು. ಈ ವೇಳೆ ಟೆರಸ್ ಮೇಲಿಂದ ಬಂದು ಮನೆಯಲ್ಲಿದ್ದ 24 ಲಕ್ಷ ನಗದು ಹಣ, 175 ಗ್ರಾಂ ಚಿನ್ನ,ಒಂದೂವರೆ ಕೆಜಿ ಬೆಳ್ಳಿ ನಾಣ್ಯ ಕಳ್ಳತನ ಮಾಡಿದ್ದರು. ಕದ್ದ ಹಣವನ್ನು ಗೋವಾ ಕೆಸಿನೊದಲ್ಲಿ ಬಳಸಿದ್ದರು ಎಂದು ತಿಳಿದು ಬಂದಿದೆ.

ಇನ್ನೂ ಈ ಘಟನೆ ಸಂಬಂಧ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ರಘುವನಹಳ್ಳಿ ರಘು@ಪೆಪ್ಸಿ ಎಸ್ಕೇಪ್ ಆಗಿದ್ದಾನೆ. ಆತನ ಪತ್ತೆಗೆ ಬಲೆ‌ ಬೀಸಿರುವ ಪೊಲೀಸರು, ಮೂವರು ಆರೋಪಿಗಳಿಂದ 9 ಲಕ್ಷ ನಗದು,ಒಂದೂವರೆ ಕೆಜಿ ಬೆಳ್ಳಿ ನಾಣ್ಯ, 175 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ.


Spread the love

LEAVE A REPLY

Please enter your comment!
Please enter your name here