ಬಾಗಿನ ಅರ್ಪಿಸಲು ಕೃಷ್ಣಾ ನದಿಗೆ ತೆರಳಿದ್ದ ಮಹಿಳೆ ನೀರುಪಾಲು!

0
Spread the love

ಚಿಕ್ಕೋಡಿ:- ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಪಕ್ಕದ ಕೃಷ್ಣಾ ನದಿಯಲ್ಲಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಲು ತೆರಳಿದ್ದ ಮಹಿಳೆ ನೀರುಪಾಲಾಗಿರುವ ಘಟನೆ ಜರುಗಿದೆ.

Advertisement

ಸಂಗೀತಾ ಶಿವಾಜಿ ಮಾಂಜರೇಕರ್ (40) ನೀರುಪಾಲಾಗಿರುವ ಮಹಿಳೆ. ನಿರಂತರ ಮಳೆಯಿಂದ ಒಡಲು ತುಂಬಿಕೊಂಡ ಕೃಷ್ಣಾ ನದಿಗೆ ಸಂಗೀತಾ ಅವರು ಬಾಗಿನ ಅರ್ಪಿಸಲು ತೆರೆಳಿದ್ದರು. ಈ ವೇಳೆ ಕಾಲು ಜಾರಿ ಬಿದ್ದು ನದಿಯಲ್ಲಿ ಕಣ್ಮರೆಯಾಗಿದ್ದಾರೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳವು ಮಹಿಳೆಗಾಗಿ ಹುಡುಕಾಟ ನಡೆಸುತ್ತಿದೆ. ಘಟನಾ ಸ್ಥಳಕ್ಕೆ ಚಿಕ್ಕೋಡಿ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here